ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಕ್ವಾಡ್ ನಾಯಕರ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಉಕ್ರೇನ್ನಲ್ಲಿನ ಬೆಳವಣಿಗೆಗಳು ಅದರ ಮಾನವೀಯ ಪರಿಣಾಮಗಳನ್ನು ಒಳಗೊಂಡಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವ ಅಗತ್ಯವನ್ನು ಮೋದಿ ಇಲ್ಲಿ ಒತ್ತಿ ಹೇಳಿದರು.
“ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ತನ್ನ ಪ್ರಮುಖ ಉದ್ದೇಶದ ಮೇಲೆ ಕ್ವಾಡ್ ಗಮನಹರಿಸಬೇಕು. ಮಾನವೀಯ ಮತ್ತು ವಿಪತ್ತು ಪರಿಹಾರ, ಸಾಲದ ಸುಸ್ಥಿರತೆ, ಪೂರೈಕೆ ಸರಪಳಿಗಳು, ಶುದ್ಧ ಶಕ್ತಿ, ಸಂಪರ್ಕ ಮತ್ತು ಸಾಮರ್ಥ್ಯ-ವರ್ಧನೆಯಂತಹ ಕ್ಷೇತ್ರಗಳಲ್ಲಿ ಕ್ವಾಡ್ನೊಳಗೆ ಪ್ರಾಯೋಗಿಕ ರೂಪಗಳ ಸಹಕಾರ ಇರಬೇಕು. ಯುಎನ್ ಚಾರ್ಟರ್, ಅಂತರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಬದ್ಧವಾಗಿರುವುದು ಅತ್ಯಂತ ಮಹತ್ವ” ಎಂದು ಪ್ರಧಾನಿ ಹೇಳಿದ್ದಾರೆ.
ಈ ವರ್ಚುವಲ್ ಸಭೆಯಲ್ಲಿ ಸೆಪ್ಟೆಂಬರ್ 2021 ಕ್ವಾಡ್ ಶೃಂಗಸಭೆಯ ನಂತರದಲ್ಲಿನ ಕ್ವಾಡ್ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಈ ವರ್ಷದ ಕೊನೆಯಲ್ಲಿ ಜಪಾನ್ನಲ್ಲಿ ನಡೆಯುವ ಶೃಂಗಸಭೆಯ ಮೂಲಕ ಫಲಿತಾಂಶಗಳನ್ನು ಸಾಧಿಸುವ ಉದ್ದೇಶದಿಂದ ಸಹಕಾರವನ್ನು ವೇಗಗೊಳಿಸಲು ನಾಯಕರು ಒಪ್ಪಿಕೊಂಡರು.
ನಾಯಕರು ಸಂಪರ್ಕದಲ್ಲಿರಲು ಮತ್ತು ಜಪಾನ್ನಲ್ಲಿ ಮುಂಬರುವ ನಾಯಕರ ಶೃಂಗಸಭೆಗಾಗಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯತ್ತ ಕೆಲಸ ಮಾಡಲು ಸಭೆಯಲ್ಲಿ ಎಲ್ಲಾ ನಾಯಕರು ಒಪ್ಪಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.