ನವದೆಹಲಿ: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕೇಂದ್ರವು ವಿಮಾನಗಳನ್ನು ಸಜ್ಜುಗೊಳಿಸುತ್ತಿದೆ ಮತ್ತು ಸ್ಥಳಾಂತರಿಸುವ ವೆಚ್ಚವನ್ನು ಭಾರತ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿತು ಹೀಗಾಗಿ ಭಾರತೀಯರನ್ನು ಕರೆ ತರಲು ಹೊರಟಿದ್ದ ಏರ್ ಇಂಡಿಯಾ ವಿಮಾನ ಮಧ್ಯಮಾರ್ಗದಿಂದ ಹಿಂತಿರುಗಬೇಕಾಯಿತು.
ಪ್ರಸ್ತುತ ಉಕ್ರೇನ್ನ ನೆರೆಯ ದೇಶಗಳ ಮೂಲಕ ಭಾರತೀಯರನ್ನು ಮರಳಿ ಕರೆತರಲು ಪರ್ಯಾಯ ಮಾರ್ಗಗಳನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಗುರುವಾರ ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಸಿಜ್ಜಾರ್ಟೊ ಅವರೊಂದಿಗೆ ಹಂಗೇರಿ ಮೂಲಕ ಸ್ಥಳಾಂತರಿಸುವ ಸಂಭವನೀಯ ಮಾರ್ಗದ ಕುರಿತು ಮಾತುಕತೆ ನಡೆಸಿದರು. ಸ್ಲೋವಾಕಿಯಾದ ವಿದೇಶಾಂಗ ಸಚಿವ ಇವಾನ್ ಕಾರ್ಕಾಕ್ ಕೂಡ ಸ್ಲೋವಾಕಿಯಾ ಮೂಲಕ ಭಾರತೀಯರನ್ನು ಸ್ಥಳಾಂತರಿಸಲು ಸಮ್ಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಉಕ್ರೇನ್-ರೊಮೇನಿಯಾ ಗಡಿಯನ್ನು ರಸ್ತೆಯ ಮೂಲಕ ತಲುಪಿದ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಇಂದು ರೊಮೇನಿಯಾ ರಾಜಧಾನಿ ಬುಕಾರೆಸ್ಟ್ಗೆ ಎರಡು ವಿಮಾನಗಳನ್ನು ನಿರ್ವಹಿಸಲು ಯೋಜಿಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ಏರ್ ಇಂಡಿಯಾ ವಿಮಾನಗಳು ಶನಿವಾರ ಬುಕಾರೆಸ್ಟ್ನಿಂದ ಹೊರಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನಿಯನ್ ರಾಜಧಾನಿ ಕೈವ್ ಮತ್ತು ರೊಮೇನಿಯನ್ ಗಡಿಯ ನಡುವಿನ ಅಂತರವು ಸರಿಸುಮಾರು 600 ಕಿಲೋಮೀಟರ್ಗಳು ಮತ್ತು ರಸ್ತೆಯ ಮೂಲಕ ದೂರವನ್ನು ಕ್ರಮಿಸಲು 8.5 ರಿಂದ 11 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ಉಕ್ರೇನ್-ರೊಮೇನಿಯಾ ಗಡಿಯಿಂದ ಬುಕಾರೆಸ್ಟ್ಗೆ ಇರುವ ಅಂತರವು ಸರಿಸುಮಾರು 500 ಕಿಲೋಮೀಟರ್ಗಳು ಮತ್ತು ರಸ್ತೆಯ ಮೂಲಕ ದೂರವನ್ನು ಕ್ರಮಿಸಲು ಏಳರಿಂದ ಒಂಬತ್ತು ಗಂಟೆಗಳ ನಡುವೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.