ನವದೆಹಲಿ: ತಮಿಳುನಾಡಿನ ಅರಿಯಲೂರು ಜಿಲ್ಲೆಯಿಂದ ದಶಕದ ಹಿಂದೆ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಆಂಜನೇಯನ ವಿಗ್ರಹ ಶೀಘ್ರದಲ್ಲೇ ಭಾರತಕ್ಕೆ ಮರಳಿ ಬರುತ್ತಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ 14 ಮತ್ತು 15 ನೇ ಶತಮಾನದ ನಡುವೆ ನಿರ್ಮಿಸಲಾದ ಈ ಪ್ರತಿಮೆಯು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರರ ಸ್ವಾಧೀನದಲ್ಲಿ ಇರುವುದು ಪತ್ತೆಯಾಗಿತ್ತು.
ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಬುಧವಾರ ಈ ಬಗ್ಗೆ ಟ್ವೀಟ್ ಮಾಡಿ, “ತಮಿಳುನಾಡಿನ ದೇವಸ್ಥಾನದಿಂದ ಕದ್ದ 500 ವರ್ಷಗಳಷ್ಟು ಹಳೆಯದಾದ ಸ್ವಾಮಿ ಆಂಜನೇಯನ ಕಂಚಿನ ವಿಗ್ರಹ ಭಾರತಕ್ಕೆ ಹಿಂತಿರುಗುತ್ತಿದೆ. ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿಯಿಂದ ಹಿಂಪಡೆಯಲಾದ ಕದ್ದ ವಿಗ್ರಹವನ್ನು ಭಾರತೀಯ ರಾಯಭಾರಿಗೆ ಹಸ್ತಾಂತರಿಸಲಾಯಿತು” ಎಂದಿದ್ದಾರೆ.
ಮಂಗಳವಾರ ಈ ವಿಗ್ರಹವನ್ನು ಕ್ಯಾನ್ಬೆರಾದಲ್ಲಿರುವ ಭಾರತೀಯ ಹೈಕಮಿಷನರ್ ಮನ್ಪ್ರೀತ್ ವೋಹ್ರಾ ಅವರಿಗೆ ಆಸ್ಟ್ರೇಲಿಯಾದ ಚಾರ್ಜ್ ಡಿ’ಅಫೇರ್ಸ್ ಮೈಕೆಲ್ ಗೋಲ್ಡ್ಮನ್ ಅವರು ಹಸ್ತಾಂತರ ಮಾಡಿದರು.
“ಈ ಆಂಜನೇಯ ವಿಗ್ರಹವನ್ನು ಏಪ್ರಿಲ್ 9, 2012 ರಂದು ಅರಿಯಲೂರಿನ ವೆಲ್ಲೂರ್ ಗ್ರಾಮದ ವರದರಾಜ ಪೆರುಮಾಳ್ ದೇವಸ್ಥಾನ ಶ್ರೀ ದೇವಿ ವಿಗ್ರಹ ಮತ್ತು ಭೂದೇವಿ ವಿಗ್ರಹದೊಂದಿಗೆ ಕಳ್ಳತನ ಮಾಡಲಾಗಿದೆ” ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಂದು ತಿಂಗಳೊಳಗೆ ವಿಗ್ರಹವನ್ನು ಭಾರತಕ್ಕೆ ತರಲಾಗುವುದು ಮತ್ತು ಅದನ್ನು ಕದಿಯಲಾಗಿದ್ದ ದೇವಸ್ಥಾನದಲ್ಲೇ ಮರುಸ್ಥಾಪಿಸಲಾಗುವುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.