ಹೈದರಾಬಾದ್: ಶಿವಮೊಗ್ಗದಲ್ಲಿ ಭಾನುವಾರ ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಗೌರವಾರ್ಥ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಇಂದು ಹೈದರಾಬಾದ್ನಲ್ಲಿ ‘ಮಶಾಲ್ ರ್ಯಾಲಿ’ ನಡೆಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಎಸ್ಐಎಂಐ) ಅನ್ನು ನಿಷೇಧಿಸುವಂತೆ ರ್ಯಾಲಿಯ ಸಂದರ್ಭದಲ್ಲಿ ಆಗ್ರಹಿಸಲಾಗಿದೆ . ಹೈದರಾಬಾದ್ನ ಕೋಟಿಯಲ್ಲಿರುವ ವಿಎಚ್ಪಿ ಕಚೇರಿಯಿಂದ ರ್ಯಾಲಿ ಆರಂಭವಾಯಿತು.
ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿದ ಬಜರಂಗದಳ ಹೈದರಾಬಾದ್ ಸಹ ಸಂಚಾಲಕ ಮಹೇಶ್ ಯಾದವ್, “ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದೆ. ನಾವು ಜಿಹಾದಿಗಳಿಗೆ ಎಚ್ಚರಿಕೆ ನೀಡುತ್ತೇವೆ, ನಾವು ಮೌನವಾಗಿರುವುದಿಲ್ಲ, ನಾವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಮತ್ತು ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸುತ್ತೇವೆ. ಅವರನ್ನು ಗಲ್ಲಿಗೇರಿಸುವವರೆಗೂ ಆಂದೋಲನ ನಿಲ್ಲುವುದಿಲ್ಲ. ಸೇನೆಯು ದೇಶಕ್ಕಾಗಿ ಗಡಿಯಲ್ಲಿ ಹೋರಾಡುವ ರೀತಿ, ನಾವು ನಮ್ಮ ದೇಶ ಮತ್ತು ದೇಶದ ಒಳಗೆ ಧರ್ಮಕ್ಕಾಗಿ ಹೋರಾಡುತ್ತಿದ್ದೇವೆ”ಎಂದಿದ್ದಾರೆ.
ವಿಎಚ್ಪಿ ಸಂಘಟನೆ ರಾಜ್ಯ ಕಾರ್ಯದರ್ಶಿ ಯಾದರೆಡ್ಡಿ ಎಎನ್ಐಗೆ ಹೇಳಿಕೆ ನೀಡಿ, ಕೇರಳದಿಂದ ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ಅನೇಕರು ಕರ್ನಾಟಕಕ್ಕೆ ಬಂದು ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ಶೀಘ್ರವೇ ಪಿಎಫ್ಐ ಮತ್ತು ಸಿಮಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, 12 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.