ನವದೆಹಲಿ: ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಅವರು ಗುರುವಾರ ಮುಂಬೈ ನಾಗರಿಕರಿಗಾಗಿ ವಾಟರ್ ಟ್ಯಾಕ್ಸಿ ಸೇವೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದ್ದಾರೆ.
ಕರಾವಳಿಯ ಮಹಾರಾಷ್ಟ್ರದ ಜನರ ಬಹುಕಾಲದ ಆಶಯವಾಗಿರುವ ವಾಟರ್ ಟ್ಯಾಕ್ಸಿ ಸೇವೆಯು ಅವಳಿ ನಗರಗಳಾದ ಮುಂಬೈ ಮತ್ತು ನವಿ ಮುಂಬೈಯನ್ನು ಮೊದಲ ಬಾರಿಗೆ ಸಂಪರ್ಕಿಸಲಿದೆ ಎಂದು ಶಿಪ್ಪಿಂಗ್ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವಾಲಯದ ಹೇಳಿಕೆಯ ಪ್ರಕಾರ, ಸೇವೆಯು ಆರಾಮದಾಯಕ, ಒತ್ತಡ-ಮುಕ್ತ ಪ್ರಯಾಣದ ಭರವಸೆ ನೀಡುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುತ್ತದೆ.
ವಾಟರ್ ಟ್ಯಾಕ್ಸಿ ಸೇವೆಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಉತ್ತೇಜನವನ್ನು ನೀಡಲಿವೆ, ವಿಶೇಷವಾಗಿ ನವಿ ಮುಂಬೈನಿಂದ ಐತಿಹಾಸಿಕ ಎಲಿಫೆಂಟಾ ಗುಹೆಗಳಿಗೆ ಇದು ಪ್ರಯಾಣಿಸಲಿದೆ. ಪ್ರವಾಸಿಗರಿಗೆ ನವಿ ಮುಂಬೈನಿಂದ ಗೇಟ್ವೇ ಆಫ್ ಇಂಡಿಯಾಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.
ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೋನೊವಾಲ್, ನಾಗರಿಕರಿಗೆ ಭಾರಿ ಪ್ರಯೋಜನಗಳನ್ನು ತರುವ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಉದ್ಯೋಗ ಸೃಷ್ಟಿಗೆ ಮಾರ್ಗಗಳನ್ನು ತೆರೆಯುವ ಯೋಜನೆಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಮುಂಬೈ ಮೆರಿಟೈಮ್ ಬೋರ್ಡ್ ಮತ್ತು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳನ್ನು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.