ನವದೆಹಲಿ: 11ನೇ ಶತಮಾನದ ಸಮಾಜ ಸುಧಾರಕ ಹಾಗೂ ಸಂತ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ನಲ್ಲಿ ಫೆಬ್ರವರಿ 5 ರಂದು ಅನಾವರಣಗೊಳಿಸಲಿದ್ದಾರೆ.
ಚಿನ್ನ ಜೀಯರ್ ಸ್ವಾಮೀಜಿ ಅವರ ಆಶ್ರಮ ಹೊರಡಿಸಿದ ಹೇಳಿಕೆಯ ಪ್ರಕಾರ, ಈ ಪ್ರತಿಮೆ ವಿಶ್ವದ ಎರಡನೇ ಅತಿದೊಡ್ಡ ಕುಳಿತುಕೊಂಡಿರುವ ಭಂಗಿಯಲ್ಲಿರುವ ಪ್ರತಿಮೆಯಾಗಿದೆ. ನಗರದ ಹೊರವಲಯದಲ್ಲಿರುವ 45 ಎಕರೆ ಸಂಕೀರ್ಣ ಪ್ರದೇಶದಲ್ಲಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಥೈಲ್ಯಾಂಡ್ನಲ್ಲಿರುವ ಬುದ್ಧನ ಪ್ರತಿಮೆಯು ಕುಳಿತಿರುವ ಭಂಗಿಯಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಹೇಳಲಾಗುತ್ತದೆ. ನಂತರದ ಸ್ಥಾನ ಈ ಪ್ರತಿಮೆಗೆ ಸಿಕ್ಕಿದೆ.
ಇದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವನ್ನು ಒಳಗೊಂಡಿರುವ ಐದು ಲೋಹಗಳ ಸಂಯೋಜನೆಯಾದ ʼಪಂಚಲೋಹʼದಿಂದ ನಿರ್ಮಿಸಲ್ಪಟ್ಟಿದೆ.
ನಂತರ ಫೆಬ್ರವರಿ 13 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 120 ಕೆಜಿ ತೂಕದ ರಾಮಾನುಜ ಅವರ ಕೋಣೆಯ ಒಳಗಿನ ಚಿನ್ನದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಚಿನ್ನ ಜೀಯರ್ ಸ್ವಾಮಿಗಳು ಈ ಬಗ್ಗೆ ಮಾಹಿತಿ ನೀಡಿ, “ಈ ಸಮಾನತೆಯ ಪ್ರತಿಮೆಯ ಮಹಾ ಉದ್ಘಾಟನೆಗೆ ಮುಖ್ಯ ಅತಿಥಿಗಳು, ಗಣ್ಯರು, ಭಕ್ತರು ಮತ್ತು ಸಮಾಜದ ಎಲ್ಲ ವರ್ಗದ ಜನರು ಸೇರಿದಂತೆ ಎಲ್ಲರನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಭಗವದ್ ರಾಮಾನುಜಾಚಾರ್ಯರು ಸಮಾನತೆಯ ನಿಜವಾದ ಐಕಾನ್ ಆಗಿದ್ದಾರೆ ಮತ್ತು ಈ ಯೋಜನೆಯು ಅವರ ಬೋಧನೆಗಳನ್ನು ಕನಿಷ್ಠ 1,000 ವರ್ಷಗಳವರೆಗೆ ಅಭ್ಯಾಸ ಮಾಡುವುದನ್ನು ಖಚಿತಪಡಿಸುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.