ಚೆನ್ನೈ: ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುವಂತೆ ಹೇರಲಾಗುತ್ತಿದ್ದ ಒತ್ತಡವನ್ನು ತಾಳಲಾರದೆ ತಮಿಳುನಾಡಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಂ ಲಾವಣ್ಯ ಅರಿಯಲೂರು ಜಿಲ್ಲೆಯ ವಡುಗಪಾಳ್ಯಂ ಗ್ರಾಮದವಳು. ತಿರುಕಟ್ಟುಪಲ್ಲಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು. ಆಕೆಯ ಸ್ನೇಹಿತರು ಮತ್ತು ಸಂಬಂಧಿಕರು ಹೇಳುವಂತೆ ಆಕೆ ಜಾಣ ವಿದ್ಯಾರ್ಥಿಯಾಗಿದ್ದಳು ಮತ್ತು ಓದಿನತ್ತ ಹೆಚ್ಚು ಗಮನ ಹರಿಸುತ್ತಿದ್ದಳು. ಆದರೆ ಇಂದು ಆಕೆ ಮತಾಂಧರ ಕುತಂತ್ರದಿಂದ ಇಹಲೋಕ ತ್ಯಜಿಸಿದ್ದಾಳೆ.
ಕ್ರಿಶ್ಚಿಯನ್ ಸಂಸ್ಥೆಯಾದ ಆಕೆಯ ಕಾಲೇಜು ಆಕೆಯನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿತ್ತು. ಆಕೆ ಮತಾಂತರವಾದರೆ ಮಾತ್ರ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು ಎಂದು ಬೆದರಿಸಿತ್ತು ಆದರೆ, ಲಾವಣ್ಯ ಮುತಾಂತರಕ್ಕೆ ನಿರಾಕರಿಸಿದ್ದಳು. ಅವಳ ವಿರೋಧದಿಂದ ಕೋಪಗೊಂಡ ಆಡಳಿತವು ಪೊಂಗಲ್ ರಜಾದಿನಗಳಲ್ಲಿ ಅವಳನ್ನು ಮನೆಗೆ ಕಳುಹಿಸಲು ನಿರಾಕರಿಸಿದೆ. ಬದಲಾಗಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಮುಂತಾದ ಕೆಲಸಗಳನ್ನು ಅವಳಿಗೆ ಕೊಟ್ಟು ಶಾಲೆಯಲ್ಲೇ ಇರುವಂತೆ ಮಾಡಿದೆ.
ಇದರಿಂದ ಮನನೊಂದ ಲಾವಣ್ಯ ಗಿಡಗಳಿಗೆ ಬಳಸುವ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜನವರಿ 9 ರ ರಾತ್ರಿ ಆಕೆಗೆ ಮೊದಲು ವಾಂತಿಯಾಗಿದ್ದು ನಂತರ ಹತ್ತಿರದ ಕ್ಲಿನಿಕ್ಗೆ ಕರೆದೊಯ್ಯಲಾಯಿತು. ವಾಂತಿಭೇದಿ ಮುಂದುವರಿದಿದ್ದರಿಂದ ಹಾಸ್ಟೆಲ್ ನ ವಾರ್ಡನ್ ಆಕೆಯ ಪೋಷಕರಿಗೆ ಕರೆ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ಮನೆಗೆ ಬಂದ ಲಾವಣ್ಯ ತಾನು ಕ್ರಿಮಿನಾಶಕ ಸೇವಿಸಿದ್ದನ್ನು ಬಹಿರಂಗಪಡಿಸಿರಲಿಲ್ಲ.
ಆಕೆಯನ್ನು ತಂಜೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಷ ಸುಮಾರು 85% ಶ್ವಾಸಕೋಶದ ಮೇಲೆ ಪರಿಣಾಮ ಬೀರಿತ್ತು. ನಂತರ ತೀವ್ರ ನಿಗಾ ಘಟಕದಲ್ಲಿ ಆಕೆಗೆ ಚಿಕಿತ್ಸೆಯನ್ನು ಮುಂದುವರೆಸಲಾಯಿತು. ಜ.18ರಂದು ಆಕೆ ಮೃತಪಟ್ಟಿದ್ದಾಳೆ. ಆಕೆಯ ಕೊನೆಯ ಮಾತುಗಳು ಈಗ ಬಹಿರಂಗವಾಗಿದೆ.
“ನನ್ನ ಹೆಸರು ಲಾವಣ್ಯ. ಶಾಲೆಯವರು ನನ್ನನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದರು, ನಾನು ಒಪ್ಪದಿದ್ದಾಗ ವಿದ್ಯಾಭ್ಯಾಸ ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ” ಎಂದಿದ್ದಾಳೆ. ತನ್ನನ್ನು ಹಿಂಸಿಸಿದ್ದು ರಾಚೆಲ್ ಮೇರಿ ಎಂದು ಆಕೆ ಹೆಸರಿಸಿದ್ದಾಳೆ.
ஏழை விவசாயி மகள் லாவண்யா வயது 27, அரியலூர் தூய இருதய மேல்நிலைப்பள்ளியில் நன்றாகப் படிக்கும், பன்னிரண்டாம் வகுப்பு மாணவி.
இவரை மதம் மாறச் சொல்லி, பள்ளியில் கொடுத்த மன அழுத்தத்தால், விஷம் அருந்தி தற்கொலை செய்து கொண்டுள்ளார். pic.twitter.com/7dDioLpIJE
— K.Annamalai (@annamalai_k) January 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.