ಬನ್ಸ್ವಾರ: ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾರುಕಟ್ಟೆ ಜಗಮಗಿಸುತ್ತಿದೆ. ಈ ಬಾರಿ, ಬಣ್ಣಬಣ್ಣದ ಗಾಳಿಪಟಗಳ ಜೊತೆಗೆ, ಗಾಳಿಪಟಗಳಲ್ಲಿ ಕೊರೋನಾವನ್ನು ತಡೆಗಟ್ಟಲು ಕೊರೋನಾ ಲಸಿಕೆಯನ್ನು ಪಡೆಯಲು ಮನವಿ ಮಾಡುವ ಸಂದೇಶಗಳು ಸಹ ಇವೆ. ಗಾಳಿಪಟಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳೊಂದಿಗೆ ಕೋವಿಡ್ ವ್ಯಾಕ್ಸಿನೇಷನ್ ಸಂದೇಶವನ್ನು ಸಹ ಹೊಂದಿವೆ. ಈ ಗಾಳಿಪಟಗಳು ಮಾರುಕಟ್ಟೆಗಳಲ್ಲಿ ಆಕರ್ಷಣೆಯ ಕೇಂದ್ರವಾಗಿವೆ.
ಬನ್ಸ್ವಾರಾ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಲ್ಲಿ ಈ ಬಾರಿ ಕೋವಿಡ್ ಲಸಿಕೆ ಸಂದೇಶಗಳನ್ನು ಹೊಂದಿರುವ ಗಾಳಿಪಟಗಳು ಮಳಿಗೆಗಳಲ್ಲಿ ಸಾಕಷ್ಟು ಮಾರಾಟ ಕಾಣುತ್ತಿವೆ. ಅಂಗಡಿಗಳಲ್ಲಿ ಅಲಂಕೃತವಾಗಿರುವ ಗಾಳಿಪಟಗಳ ಮೇಲೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದೊಂದಿಗೆ ಕೋವಿಡ್ ಲಸಿಕೆ ಸಂದೇಶವನ್ನು ನೀಡಲಾಗುತ್ತಿದೆ. ಈ ಗಾಳಿಪಟಗಳಲ್ಲಿ, ಪ್ರಧಾನಿ ಮೋದಿಯವರ ಫೋಟೋದೊಂದಿಗೆ, ವಿಶ್ವದ ಅತಿದೊಡ್ಡ ಉಚಿತ ಲಸಿಕೆ ಅಭಿಯಾನದ ಸಂದೇಶವನ್ನು ನೀಡಲಾಗಿದೆ.
ನಗರದಲ್ಲಿ ಕೋವಿಡ್ ಲಸಿಕೆ ಸಂದೇಶವಿರುವ ಗಾಳಿಪಟಗಳೂ ಹೆಚ್ಚು ಮಾರಾಟವಾಗುತ್ತಿವೆ. ಇದಲ್ಲದೇ ಪ್ರಧಾನಿ ಮೋದಿಯವರು ದೇಶದಲ್ಲಿ ಮಾಡಿರುವ ಯೋಜನೆಗಳು, ಅವರ ಚಿತ್ರ ಇರುವ ಗಾಳಿಪಟಗಳು ಕೂಡ ಭಾರೀ ಪ್ರಮಾಣದಲ್ಲಿ ಮಾರಾಟವಾಗು ತ್ರಿವರ್ಣ ಧ್ವಜ, ಆತ್ಮನಿರ್ಭರ ಭಾರತ ಸಂದೇಶ ಸಾರುವ, ಬೇಟಿ ಬಚಾವೋ ಬೇಟಿ ಪಢಾವೋ ಎಂಬ ಘೋಷಣೆಯೊಂದಿಗೆ ಗಾಂಧಿ ಫೋಟೋ, ವಿಭಿನ್ನ ಸಮೃದ್ಧ ಭಾರತ ಸೇರಿದಂತೆ ವಿಧ ವಿಧದ ಗಾಳಿಪಟಗಳು ಮಾರುಕಟ್ಟೆಗಳಲ್ಲಿ ಭಾರೀ ಮಾರಾಟ ಕಾಣುತ್ತಿವೆ.
ಗಾಳಿಪಟ ವ್ಯಾಪಾರಿ ಮುಖೇಶ್ ನಾಯಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಉಚಿತ ಲಸಿಕಾ ಅಭಿಯಾನದ ಘೋಷಣೆಯೊಂದಿಗೆ ಈ ಬಾರಿ ಗಾಳಿಪಟ ವ್ಯಾಪಾರಿಗಳು ಗಾಳಿಪಟವನ್ನು ತಯಾರಿಸಿದ್ದಾರೆ. ಇದು ಬಹಳಷ್ಟು ಮಾರಾಟವಾಗುತ್ತಿದೆ. ಕೋವಿಡ್ ಮತ್ತೊಮ್ಮೆ ಹೆಚ್ಚಾಗುತ್ತಿರುವ ಕಾರಣ ಲಸಿಕೆ ಹಾಕಿಸಿಕೊಳ್ಳುವಂತೆ ಗಾಳಿಪಟಗಳ ಮೂಲಕ ನಮ್ಮ ಸಂದೇಶವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.