ವಾರಣಾಸಿ: ಮೊದಲ ಕಾಶಿ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ವಾರಣಾಸಿಯಲ್ಲಿ ಸೋಮವಾರ ಪ್ರಾರಂಭವಾಗಿದೆ. ಉತ್ತರಪ್ರದೇಶ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ದತ್ತಿ ವ್ಯವಹಾರಗಳ ಸಚಿವ ನೀಲಕಂಠ ತಿವಾರಿ ನಿನ್ನೆ ಸಂಜೆ ಉತ್ಸವವನ್ನು ಉದ್ಘಾಟಿಸಿದರೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಎರಡನೇ ದಿನದ ಉತ್ಸವದಲ್ಲಿ ಉಪಸ್ಥಿತರಿರಲಿದ್ದಾರೆ.
ಮೂರು ದಿನಗಳ ಉತ್ಸವವು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಕಿರುನೋಟಗಳನ್ನು ಮತ್ತು ಪ್ರಸಿದ್ಧ ತತ್ವಜ್ಞಾನಿಗಳು, ಕವಿಗಳು, ಬರಹಗಾರರು ಮತ್ತು ಸಂಗೀತಗಾರರ ಪ್ರದರ್ಶನಗಳನ್ನು ಒಳಗೊಳ್ಳಲಿದೆ.
ಈ ಪುರಾತನ ನಗರವು ಚಲನಚಿತ್ರ ನಿರ್ಮಾಪಕರು ಮತ್ತು ಚಲನಚಿತ್ರ ಪ್ರೇಮಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ. ಉತ್ಸವದಲ್ಲಿ ಕಾಶಿಯು ರಂಗಭೂಮಿ, ಸಂಗೀತ, ಸಂಸ್ಕೃತಿ, ಕಲೆ ಮತ್ತು ಬಾಲಿವುಡ್ನ ವೈಭವವನ್ನು ವೀಕ್ಷಿಸಲಿದೆ.
ಚಲನಚಿತ್ರ ಬಂಧು ಮತ್ತು ಉತ್ತರ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಉತ್ಸವವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮದ ಮೊದಲ ದಿನದಂದು ನಟ ಮನೋಜ್ ಜೋಶಿ, ಗಾಯಕ ಕೈಲಾಶ್ ಖೇರ್ ಮತ್ತು ಹಾಸ್ಯನಟ ರಾಜು ಶ್ರೀವಾಸ್ತವ ಕಾರ್ಯಕ್ರಮ ನೀಡಿದರು. ನಟಿ ಹೇಮಾ ಮಾಲಿನಿ, ಅನುಪಮ್ ಖೇರ್, ರಾಜ್ಪಾಲ್ ಯಾದವ್, ಸತೀಶ್ ಕೌಶಿಕ್ ಸೇರಿದಂತೆ ಬಾಲಿವುಡ್ನ ಇತರ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.
ವಾರಣಾಸಿ, ಸ್ಥಳೀಯ ಸಂಗೀತ, ಚಲನಚಿತ್ರ ನಿರ್ಮಾಣದ ಕೇಂದ್ರವಾಗಿ ಉತ್ತರ ಪ್ರದೇಶದ ಪ್ರಾಮುಖ್ಯತೆ ಮತ್ತು ಪ್ರಾದೇಶಿಕ ಸಿನಿಮಾದ ಸಾಮರ್ಥ್ಯದ ಕುರಿತು ಪ್ಯಾನೆಲ್ ಡಿಸ್ಕಷನ್ ಕಾರ್ಯಕ್ರಮದ ಎರಡನೇ ದಿನ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.