ವಡೋದರ: ಒಟ್ಟು 109 ಯುವಕರು ಗುಜರಾತಿನ ವಡೋದರಾದಲ್ಲಿ BAPS ಸ್ವಾಮಿನಾರಾಯಣ ಸಂಸ್ಥೆ ಆಯೋಜಿಸಿದ ದೀಕ್ಷಾ ಮಹೋತ್ಸವದಲ್ಲಿ ದೀಕ್ಷೆಯನ್ನು ಸ್ವೀಕಾರ ಮಾಡಿದ್ದಾರೆ. ಮಹಾಂತ ಸ್ವಾಮಿ ಮಹಾರಾಜ ಅವರು ಇವರಿಗೆ ದೀಕ್ಷೆಯನ್ನು ಪ್ರಧಾನಿಸಿದ್ದಾರೆ.
ಡಿಸೆಂಬರ್ 8ರಂದು ನಡೆದ ದೀಕ್ಷಾ ಮಹೋತ್ಸವದ ಮೊದಲ ದಿನದಂದು 54 ಯುವಕರು ದೀಕ್ಷೆಯನ್ನು ಸ್ವೀಕರಿಸಿದ್ದಾರೆ. ಡಿಸೆಂಬರ್ 9ರಂದು ನಡೆದ ಎರಡನೇ ದಿನದ ದೀಕ್ಷಾ ಮಹೋತ್ಸವದಲ್ಲಿ 55 ಮಂದಿ ಯುವಕರು ದೀಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಜೀವನ ಪರ್ಯಂತ ಸನ್ಯಾಸ ಜೀವನವನ್ನು ನಡೆಸುವುದಾಗಿ ಈ ಯುವಕರು ದೀಕ್ಷೆ ಸ್ವೀಕರಿಸಿದ್ದಾರೆ. ಸರನ್ಗುರು BAPS ಸ್ವಾಮಿನಾರಾಯಣ ಸಂಸ್ಥೆಯ ಸಂತ ತಲಿಂ ಕೇಂದ್ರದಲ್ಲಿ ಈ ಯುವಕರು ಮೂರು ವರ್ಷಗಳ ತರಬೇತಿಯನ್ನು ಪಡೆಯಲಿದ್ದಾರೆ.
109 ಯುವಕರ ಪೈಕಿ 14 ಮಂದಿ ವಿದೇಶಿ ನಿವಾಸಿಗಳು, 29 ಮಂದಿ ಪದವೀಧರರು, 14 ಮಂದಿ ಸ್ನಾತಕೋತ್ತರ ಪದವೀಧರರು, 42ಮಂದಿ ಇಂಜಿನಿಯರ್ಗಳು, 46 ಮಂದಿ ತಮ್ಮ ಪೋಷಕರಿಗೆ ಒಬ್ಬರೇ ಮಕ್ಕಳು.
ಪ್ರಮುಖ ಸ್ವಾಮಿ ಮಹಾರಾಜ್ ಅವರ ನೂರನೇ ಜನ್ಮ ದಿನದ ಪ್ರಯುಕ್ತ ದೀಕ್ಷಾ ಮಹೋತ್ಸವ ಆಯೋಜನೆಗೊಂಡಿದೆ.
Over 100 youths take diksha to leave worldly life and become BAPS monks in Gujarat https://t.co/LjTtYiX5TO pic.twitter.com/CftZ9L4a0j
— DeshGujarat (@DeshGujarat) December 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.