ನವದೆಹಲಿ: ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)ಯನ್ನು ಪರಿಚಯಿಸಲು ಆರ್ಬಿಐ ಹಂತ ಹಂತದ ಅನುಷ್ಠಾನ ಕಾರ್ಯತಂತ್ರವನ್ನು ಸಿದ್ಧಪಡಿಸುತ್ತಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ಲೋಕಸಭೆಗೆ ತಿಳಿಸಿದೆ.
ಬಿಜೆಪಿ ಸಂಸದ ರಾಕೇಶ್ ಸಿಂಗ್ ಅವರು ಡಿಜಿಟಲ್ ಕರೆನ್ಸಿಯನ್ನು ಹೊರತರುವ ಸಾಧ್ಯತೆ, ಅದರ ಪ್ರಾಯೋಗಿಕತೆ ಮತ್ತು ಉಪಯುಕ್ತತೆಯ ಕುರಿತು ಕೇಂದ್ರಕ್ಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಹಣಕಾಸು ಸಚಿವಾಲಯ ಈ ಮಾಹಿತಿಯನ್ನು ನೀಡಿದೆ. ಅಕ್ಟೋಬರ್ 2021 ರಲ್ಲಿ, ಕರೆನ್ಸಿಯನ್ನು ಡಿಜಿಟಲ್ ರೂಪದಲ್ಲಿ ತರಲು ‘ಬ್ಯಾಂಕ್ ನೋಟು’ ವ್ಯಾಖ್ಯಾನವನ್ನು ವಿಸ್ತರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ಗೆ ತಿದ್ದುಪಡಿ ಮಾಡಲು ಆರ್ಬಿಐ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.
“ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಪರಿಚಯವು ಗಮನಾರ್ಹ ಪ್ರಯೋಜನಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ ನಗದು ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು, ಕಡಿಮೆ ವಹಿವಾಟು ವೆಚ್ಚ, ಕಡಿಮೆ ಸೆಟಲ್ಮೆಂಟ್ ಅಪಾಯ ನೀಡುತ್ತದೆ. ಡಿಜಿಟಲ್ ಕರೆನ್ಸಿಯ ಪರಿಚಯವು ಹೆಚ್ಚು ದೃಢವಾದ, ಸಮರ್ಥ, ವಿಶ್ವಾಸಾರ್ಹ, ನಿಯಂತ್ರಿತ ಮತ್ತು ಕಾನೂನು ಆಧಾರಿತ ಪಾವತಿಗಳ ಆಯ್ಕೆಗೆ ಕಾರಣವಾಗಬಹುದು. ಸಂಭಾವ್ಯ ಪ್ರಯೋಜನಗಳಂತೆ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಾದ ಸಂಬಂಧಿತ ಅಪಾಯಗಳು ಸಹ ಇದೆ. ಇದೇ ರೀತಿ, ಡಿಜಿಟಲ್ ಕರೆನ್ಸಿ ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಚಂಚಲತೆಯನ್ನು ಹೊಂದಿರುವುದಿಲ್ಲ. ಯಾಕೆಂದರೆ ಇದು ಆರ್ಬಿಐನಿಂದ ಬೆಂಬಲಿತವಾಗಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.