ಆಗ್ರಾ: ಆಗ್ರಾದ ಮೊಘಲ್ ರಸ್ತೆಯನ್ನು ಗುರುವಾರ ಮಹಾರಾಜ ಅಗ್ರಸೇನ್ ಮಾರ್ಗ ಎಂದು ಮರುನಾಮಕರಣ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಗ್ರಾ ಮೇಯರ್ ನವೀನ್ ಜೈನ್, “ಮುಂಬರುವ ಪೀಳಿಗೆಯು ಪ್ರಮುಖ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಬೇಕು” ಎಂದು ಹೇಳಿದ್ದಾರೆ.
“ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಕಮಲಾ ನಗರ, ಗಾಂಧಿನಗರ, ವಿಜಯನಗರ ಕಾಲೋನಿ, ನ್ಯೂ ಆಗ್ರಾ ವಲಯ, ಬಲ್ಕೇಶ್ವರ ಪ್ರದೇಶಗಳಲ್ಲಿನ ಮಹಾರಾಜ ಅಗ್ರಸೇನರ ಸಾವಿರಾರು ಅನುಯಾಯಿಗಳು ಮರುನಾಮಕರಣದ ಸಂದರ್ಭ ಇಲ್ಲಿಗೆ ಬಂದು ಗೌರವ ಸಲ್ಲಿಸಿದರು” ಎಂದಿದ್ದಾರೆ.
ಮಹಾರಾಜ ಅಗ್ರಸೇನ್ ಅಗ್ರೋಹದ ಪ್ರಸಿದ್ಧ ರಾಜನಾಗಿದ್ದರು, ಇದು ವ್ಯಾಪಾರಿಗಳ ನಗರವಾಗಿತ್ತು ಎಂಬ ಪ್ರತೀತಿ ಇದೆ.
“ಹಿಂದೆ, ಸುಲ್ತಂಗಂಜ್ ಪುಲಿಯಾಗೆ ದಿವಂಗತ ಸತ್ಯ ಪ್ರಕಾಶ್ ವಿಕಲ್ ಅವರ ಹೆಸರನ್ನು ಇಡಲಾಗಿತ್ತು. ಅಲ್ಲದೆ, ನಾವು ಆಗ್ರಾದ ಘಾಟಿಯಾ ಅಜಮ್ ಖಾನ್ ರಸ್ತೆಗೆ ದಿವಂಗತ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರನ್ನು ಇಟ್ಟಿದ್ದೇವೆ” ಎಂದು ಅವರು ಹೇಳಿದ್ದಾರೆ.
ಮಾತ್ರವಲ್ಲದೇ ರಾಜ್ಯದ ಎರಡು ಕಡೆಗಳಲ್ಲಿ ಮಹಾನ್ ವ್ಯಕ್ತಿಗಳ ಮೂರ್ತಿಗಳನ್ನು ಸ್ಥಾಪಿಸಲಾಗುವುದು ಎಂದು ಜೈನ್ ಘೋಷಿಸಿದ್ದಾರೆ.
“ವಿಕ್ಟೋರಿಯಾ ಪಾರ್ಕ್ನ ಮುಂಭಾಗದಲ್ಲಿ ಮಹಾನ್ ಯೋಧ ಗೋಕುಲ ಜಾಟ್ನ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಅಲ್ಲದೆ, ಯಮುನಾ ಕಿನಾರಾ ರಸ್ತೆಯಲ್ಲಿ ಮಹಾರಾಣಾ ಪ್ರತಾಪ್ ಅವರ ಪ್ರತಿಮೆಯನ್ನು ಸಹ ಸ್ಥಾಪಿಸಲಾಗುವುದು. ನಾವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರತಿಮೆಯನ್ನು ಉದ್ಘಾಟಿಸುವಂತೆ ಕೋರಿದ್ದೇವೆ” ಎಂದಿದ್ದಾರೆ.
ಪ್ರಸ್ತುತ ಮತ್ತು ಮುಂಬರುವ ಪೀಳಿಗೆಗೆ ದೇಶದ ವಿವಿಧ ಮಹಾನ್ ವ್ಯಕ್ತಿಗಳ ಪರಿಚಯವಾಗಲು ಸಹಾಯ ಮಾಡುವುದು ಇಂತಹ ಉಪಕ್ರಮಗಳ ಉದ್ದೇಶವಾಗಿದೆ ಎಂದು ಜೈನ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.