ವಿಶ್ವಸಂಸ್ಥೆ: ಶಾಂತಿ ಪಾಲನೆಗೆ ಭಾರತ ಹೆಚ್ಚಿನ ಸಹಕಾರವನ್ನು ನೀಡುತ್ತದೆ ಎಂಬುದಾಗಿ ನಂಬುತ್ತೇವೆ ಎಂದು ವಿಶ್ವಸಂಸ್ಥೆ ಶಾಂತಿ ಪಾಲನಾ ಮುಖ್ಯಸ್ಥರು ಹೇಳಿದ್ದಾರೆ. ಅಲ್ಲದೇ, ಮಿಷನ್ ಆದ್ಯಂತ ಬ್ಲ್ಯೂ ಹೆಲ್ಮೆಟ್ಗಳನ್ನು ನಿಯೋಜಿಸಲು ಸಹಾಯ ಮಾಡುವ ಸಾಮರ್ಥ್ಯ ಮತ್ತು ತಂತ್ರಜ್ಞಾನಗಳನ್ನು ಭಾರತ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ತಿಂಗಳು ಸಿಯೋಲ್ನಲ್ಲಿ ನಡೆಯಲಿರುವ ಯುಎನ್ ಶಾಂತಿಪಾಲನಾ ಸಚಿವರ ಸಭೆಯ ಮುನ್ನ ಭಾರತಕ್ಕೆ ಎರಡು ಸಂದೇಶಗಳನ್ನು ಹೊಂದಿದ್ದೇನೆ ಎಂಬುದಾಗಿ ಶಾಂತಿ ಕಾರ್ಯಾಚರಣೆಗಳ ಅಂಡರ್ ಸೆಕ್ರೆಟರಿ ಜನರಲ್ ಜೀನ್ ಪಿಯರ್ ಲ್ಯಾಕ್ರೊಯಿಕ್ಸ್ ಅವರು ಹೇಳಿದ್ದು, ಭಾರತ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡುವ ಅತಿದೊಡ್ಡ ಪಡೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
“ಒಂದು ಕೃತಜ್ಞತೆಯ ಸಂದೇಶವಾಗಿದೆ, ಏಕೆಂದರೆ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪ್ರಬಲ ಬೆಂಬಲಿಗರಲ್ಲಿ ಒಂದಾಗಿದೆ. ಭಾರತ ರಾಜಕೀಯ ಬೆಂಬಲ, ಸಾಮರ್ಥ್ಯದ ವಿಷಯದಲ್ಲಿ ಬೆಂಬಲ ನೀಡುತ್ತಿದೆ ಮತ್ತು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದೆ” ಎಂದು ಲ್ಯಾಕ್ರೊಯಿಕ್ಸ್ ಹೇಳಿದ್ದಾರೆ.
ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ತಮ್ಮ ಪ್ರಾಣವನ್ನು ಕಳೆದುಕೊಂಡ ಭಾರತೀಯ ಶಾಂತಿಪಾಲಕರ ತ್ಯಾಗವನ್ನು ನಾನು ಮರೆಯುವುದಿಲ್ಲಎಂದಿದ್ದಾರೆ.
“ಅದರ ಜೊತೆಗೆ, ಎರಡನೇ ಸಂದೇಶವು ಬಲವಾದ ನಿರೀಕ್ಷೆಯಾಗಿದೆ. ಭಾರತವು ನಮಗೆ ಅಗತ್ಯವಿರುವ ಸಾಮರ್ಥ್ಯಗಳನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.