ನವದೆಹಲಿ: ಭಾರತದ ಸಾರ್ವಭೌಮತೆ ಮತ್ತು ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿ ನಾಗರಿಕ ಮತ್ತು ಸಶಸ್ತ್ರ ಪೊಲೀಸ್ ಪಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಅವರು ಇಂದು ಬೆಳಗ್ಗೆ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಭಾರತೀಯ ಪೊಲೀಸ್ ಸೇವಾ ಪ್ರೊಬೇಷನರ್ಗಳ ಪಾಸಿಂಗ್ ಔಟ್ ಪರೇಡ್ನಲ್ಲಿ ಮಾತನಾಡಿದರು.
ಪ್ರೊಬೇಷನರಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ದೋವಲ್, ರಾಷ್ಟ್ರೀಯ ಪೊಲೀಸ್ ಅಕಾಡೆಮಿಯು ಐಪಿಎಸ್ ಪ್ರೊಬೇಷನರ್ಗಳಿಗೆ ಆಧುನಿಕ ಮತ್ತು ಸುಧಾರಿತ ವಿಧಾನಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ತರಬೇತಿಯನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
ಪಂಜಾಬ್-ಕೇಡರ್ IPS ಪ್ರೊಬೇಷನರ್ ಡಾ. ದರ್ಪಣ್ ಅಹ್ಲುವಾಲಿಯಾ ಪಾಸಿಂಗ್ ಔಟ್ ಪರೇಡ್ ಅನ್ನು ಮುನ್ನಡೆಸಿದರು. 73 ನೇ ಬ್ಯಾಚ್ನ 132 ಐಪಿಎಸ್ ಪ್ರಶಿಕ್ಷಣಾರ್ಥಿಗಳು ಮತ್ತು 17 ವಿದೇಶಿ ಅಧಿಕಾರಿ ಟ್ರೈನಿಗಳು ಸೇರಿದಂತೆ ಒಟ್ಟು 149 ಅಧಿಕಾರಿಗಳು ಪರೇಡ್ನಲ್ಲಿ ಭಾಗವಹಿಸಿದ್ದರು.
ಅಕಾಡೆಮಿ ನಿರ್ದೇಶಕ ಅತುಲ್ ಕರ್ವಾಲ್ ಮಾತನಾಡಿ, ಈ ಬ್ಯಾಚ್ ನಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿದ್ದು, ತರಬೇತಿ ಪಡೆಯುವವರಲ್ಲಿ ಶೇ.20ರಷ್ಟು ಮಹಿಳೆಯರೇ ಇದ್ದಾರೆ. 60 ವಾರಗಳ ಅವಧಿಯ ತರಬೇತಿಯಲ್ಲಿ ವರ್ತನೆ, ನಡವಳಿಕೆ, ನಮ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ, ಏಕೆಂದರೆ ಅವರು ಒಬ್ಬ ವ್ಯಕ್ತಿಯನ್ನು ಉತ್ತಮ ಮನುಷ್ಯನನ್ನಾಗಿ ಮಾಡುತ್ತಾರೆ ಮತ್ತು ಆ ಮೂಲಕ ಉತ್ತಮ ಅಧಿಕಾರಿಯಾಗುತ್ತಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.