ನವದೆಹಲಿ: ಫೆಬ್ರವರಿ 2019 ರಲ್ಲಿ ಪಾಕಿಸ್ಥಾನದೊಂದಿಗಿನ ವೈಮಾನಿಕ ಯುದ್ಧದಲ್ಲಿ ಶತ್ರು ದೇಶದ ಜೆಟ್ ಅನ್ನು ಹೊಡೆದುರುಳಿಸಿ ಮೂರು ದಿನಗಳ ಕಾಲ ಸೆರೆಯಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಭಡ್ತಿ ಪಡೆದುಕೊಂಡಿದ್ದಾರೆ. ಭಾರತೀಯ ವಾಯುಪಡೆಯು ಅವರಿಗೆ ಗ್ರೂಪ್ ಕ್ಯಾಪ್ಟನ್ ಶ್ರೇಣಿಯನ್ನು ಅನುಮೋದಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಗ್ರೂಪ್ ಕ್ಯಾಪ್ಟನ್ ಶ್ರೇಣಿಯನ್ನು ಅಭಿನಂದನ್ ಅವರಿಗೆ ಅನುಮೋದಿಸಲಾಗಿದೆ ಮತ್ತು ನಿಗದಿತ ಕಾರ್ಯವಿಧಾನ ಪೂರ್ಣಗೊಂಡ ನಂತರ ಅವರು ಅದನ್ನು ಪಡೆಯುತ್ತಾರೆ ಎಂದು ವಾಯುಸೇನಾ ಮೂಲಗಳು ತಿಳಿಸಿವೆ.
ಹುದ್ದೆ ಖಾಲಿಯಾದ ನಂತರವೇ ಹೊಸ ಶ್ರೇಣಿಯನ್ನು ಪಡೆದ ಅಧಿಕಾರಿಗೆ ಹುದ್ದೆ ಸ್ವೀಕರಿಸಲು ಸಾಧ್ಯವಾಗುತ್ತದೆ.
ಫೆಬ್ರವರಿ 27, 2019 ರಂದು ನೆರೆಯ ಪಾಕಿಸ್ಥಾನದ ವಿರುದ್ಧ ಭಾರತವು ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿ ಪ್ರತಿಕಾರ ತೀರಿಸಿಕೊಂಡಿತ್ತು. ಇದರಲ್ಲಿ ಅಭಿನಂದನ್ ವರ್ಧಮಾನ್ ಪಾಕಿಸ್ಥಾನದ ಜೆಟ್ ಅನ್ನು ಉರುಳಿಸಿದ್ದರು, ದುರಾದೃಷ್ಟವಶಾತ್ ಪಾಕ್ ನೆಲಕ್ಕೆ ಬಿದ್ದು ಬಂಧಿಯಾದರು. ಆದರೆ ಬಳಿಕ ಭಾರತದ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಅವರನ್ನು ವಾಪಾಸ್ ಕಳುಹಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.