ವಡೋದರಾ: ಮಣ್ಣನ್ನು ಬಳಸಿ ಪಟಾಕಿ ತಯಾರಿಸುವ 400 ವರ್ಷಗಳ ಹಳೆಯ ವಿಧಾನ ವಡೋದರಾದಲ್ಲಿ ಮತ್ತೆ ಜೀವ ಪಡೆದುಕೊಂಡಿದೆ.
ವಡೋದರಾ ಜಿಲ್ಲೆಯ ಕುಮ್ಹರ್ವಾಡ, ಫತೇಪುರ್ನಲ್ಲಿ, ಕೆಲವು ಕುಶಲಕರ್ಮಿಗಳು ಜೇಡಿಮಣ್ಣಿನಿಂದ ಕೋತಿಸ್ ಎಂದು ಕರೆಯಲ್ಪಡುವ ವಿವಿಧ ಪಟಾಕಿಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆದರೆ ನಂತರ, ಚೀನಾದ ಪಟಾಕಿಗಳು ಭಾರತೀಯ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡ ಬಳಿಕ ಸುಮಾರು ಎರಡು ದಶಕಗಳ ಕಾಲ ಈ ಪಟಾಕಿಗಳ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು.
ನಾಲ್ಕು ಶತಮಾನಗಳಷ್ಟು ಹಳೆಯದಾದ ಈ ಕಲೆಯ ಪುನರುತ್ಥಾನಕ್ಕೆ ಪ್ರಮುಖ್ ಪರಿವಾರ ಫೌಂಡೇಶನ್ ಎಂಬ ಎನ್ಜಿಒ ಸಹಾಯ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ವೋಕಲ್ ಫಾರ್ ಲೋಕಲ್’ ಧ್ಯೇಯವಾಕ್ಯವು ಈ ಹಳೆಯ ಕಲೆಗೆ ಮತ್ತೆ ಜೀವ ತುಂಬುವಂತೆ ಮಾಡಲು ಎನ್ಜಿಒಗೆ ಸ್ಫೂರ್ತಿ ನೀಡಿದೆ. ಇದು ಈ ಕಲಾ ಪ್ರಕಾರವನ್ನು ಹೊಸ ಪೀಳಿಗೆಗೆ ಕಲಿಸಿದೆ ಮತ್ತು ಇದರ ಮೂಲಕ ಹೆಚ್ಚು ಅಗತ್ಯವಿರುವ ಉದ್ಯೋಗವಕಾಶವನ್ನೂ ಸೃಷ್ಟಿಸಲಾಗುತ್ತಿದೆ.
ಪ್ರಮುಖ್ ಪರಿವಾರ ಪ್ರತಿಷ್ಠಾನದ ಅಧ್ಯಕ್ಷ ನಿಟಾಲ್ ಗಾಂಧಿ ಮಾತನಾಡಿ, ‘ಈ ಪಟಾಕಿಗಳು ಶೇ.100 ರಷ್ಟು ಸ್ವದೇಶಿ, ಕೋತಿಸ್ಗಳನ್ನು ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ, ಕುಂಬಾರರು ಜೇಡಿಮಣ್ಣಿನಿಂದ ತಯಾರಿಸಿದ್ದಾರೆ, ಚಕ್ರಿಯನ್ನು ಕಾಗದ ಮತ್ತು ಬಿದಿರಿನಿಂದ ತಯಾರಿಸಲಾಗುತ್ತದೆ. ನಮ್ಮ ಉದ್ದೇಶವು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಉದ್ಯೋಗ ಅವಕಾಶ ಒದಗಿಸುವುದಾಗಿದೆ. ಇವು ಪರಿಸರ ಸ್ನೇಹಿ. ಬಳಸಿದ ನಂತರ ಅವು ಕರಗುತ್ತವೆ. ಅಲ್ಲದೆ, ಅವು ಮಕ್ಕಳಿಗೆ ಸುರಕ್ಷಿತವಾಗಿರುತ್ತವೆ. ಯಾರು ಬೇಕಾದರೂ ಈ ಪಟಾಕಿಗಳನ್ನು ಬಳಸಬಹುದು. ನಮ್ಮ ಥೀಮ್ ‘ಲೋಕಲ್ ಫಾರ್ ವೋಕಲ್’.” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.