ಅಯೋಧ್ಯೆ: ಉತ್ತರ ಪ್ರದೇಶದ ಪವಿತ್ರ ನಗರ ಅಯೋಧ್ಯೆಯಲ್ಲಿ ಸೋಮವಾರ ಸಂಜೆ ‘ದೀಪೋತ್ಸವ’ ಆಚರಣೆಗಳು ಅದ್ಧೂರಿಯಾಗಿ ಆರಂಭಗೊಂಡಿವೆ.
ಭವ್ಯವಾದ ‘ರಾಮ್ ಕಿ ಪೈಡಿ’ ಘಾಟ್ ಮೆಗಾ ಆಚರಣೆಗಾಗಿ ವರ್ಣರಂಜಿತ ದೀಪಗಳಿಂದ ಅಲಂಕೃತಗೊಂಡಿದೆ. ಘಾಟ್ ದೀಪೋತ್ಸವ ಆಚರಣೆಯ ಪ್ರಮುಖ ಸ್ಥಳವಾಗಿದ್ದು, ಬುಧವಾರ ದೀಪಾವಳಿಯ ಮುನ್ನಾದಿನದಂದು ಒಂಬತ್ತು ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತಿದೆ.
ಸತತ ಐದನೇ ವರ್ಷವೂ ದೀಪೋತ್ಸವ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಸಂಭ್ರಮ ಹೆಚ್ಚಾಗುತ್ತಿದೆ. ರಾಮ ಕಥಾ ಪಾರ್ಕ್ನಲ್ಲಿ ಶಿಲ್ಪ ಬಜಾರ್ ಉದ್ಘಾಟನೆಯೊಂದಿಗೆ ಆಚರಣೆಗಳು ಪ್ರಾರಂಭವಾಗಿವೆ.
ಉದ್ಘಾಟನಾ ದಿನದಂದು, ನಾಗಪುರದ ಪ್ರಸಿದ್ಧ ವಾಟ್ಕರ್ ಸಹೋದರಿಯರಾದ ಭಾಗ್ಯಶ್ರೀ ಮತ್ತು ಧನಶ್ರೀ ಅವರು ರಾಮಾಯಣದ ವಿವಿಧ ಭಾಗಗಳ ಸಂಗೀತ ರೂಪಣೆಯನ್ನು ಪ್ರಸ್ತುತಪಡಿಸಿದರು.
ಲಕ್ನೋದ ಇಶಾ ರತನ್ ಮತ್ತು ಮಿಶಾ ರತನ್ ಅವರು ಕಥಕ್ ನೃತ್ಯವನ್ನು ಪ್ರಸ್ತುತಪಡಿಸಿದರೆ, ಖ್ಯಾತ ಭಜನ್ ಗಾಯಕ ಅನೂಪ್ ಜಲೋಟಾ ತಮ್ಮ ಭಕ್ತಿಗೀತೆಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದರು.
ನೇಪಾಳದ ಜನಕ್ಪುರದ ಕಲಾವಿದರ ತಂಡ ರಾಮಾಯಣ ಕುರಿತು ಪ್ರದರ್ಶನ ನೀಡಿತು. ಎಲ್ಲಾ ದೇವಾಲಯಗಳು, ಹಾದಿಗಳು ಮತ್ತು ಅಯೋಧ್ಯೆಯ ಉಪ ರಸ್ತೆಗಳಲ್ಲಿಯೂ ಸಹ ಅಲಂಕಾರ ಮಾಡಲಾಗಿದೆ.
ಅಯೋಧ್ಯೆಯ ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಸೋಮವಾರ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆಗಳು ಆರಂಭಗೊಂಡಿವೆ. ಇಡೀ ನಗರವನ್ನು ಅಲಂಕರಿಸಲಾಗಿದೆ. ಬುಧವಾರದಂದು ಮುಖ್ಯ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆಯಲಿದೆ” ಎಂದಿದ್ದಾರೆ.
ಅಯೋಧ್ಯೆ ಆಡಳಿತವು ಬುಧವಾರ ರಾಮ್ ಕಿ ಪೈಡಿಯಲ್ಲಿ ದೀಪಗಳನ್ನು ಬೆಳಗಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ದಾಖಲೆ ಮಾಡಲಿದೆ. ಈ ವರ್ಷ ಒಂಬತ್ತು ಲಕ್ಷ ಮಣ್ಣಿನ ದೀಪಗಳು ರಾಮ್ ಕಿ ಪೈಡಿಯನ್ನು ಬೆಳಗಿಸುತ್ತವೆ ಎಂದು ಮೂಲಗಳು ತಿಳಿಸಿವೆ.
Only BJP govt can give such beautiful moments!
Jai Shri Ram!#Ayodhya pic.twitter.com/4Rn0k3KSwV
— Vishnu Vardhan Reddy (@SVishnuReddy) November 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.