ಶ್ರೀನಗರ: ಸೆಪ್ಟೆಂಬರ್ 26ರಂದು ಉರಿ ವಲಯದಲ್ಲಿ ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ಪಾಕಿಸ್ತಾನ ಉಗ್ರನನ್ನು ಮೊನ್ನೆ ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸಲಾಗಿದೆ. 19 ವರ್ಷದ ಈ ಉಗ್ರನ ಹೆಸರು ಅಲಿ ಬಾಬರ್ ಪಾತ್ರ, ಈತನಿಗೆ 20 ಸಾವಿರ ರೂಪಾಯಿಗಳನ್ನು ನೀಡಿ ಪಾಕಿಸ್ಥಾನಿ ಹ್ಯಾಂಡ್ಲರ್ಗಳು ಶಸ್ತ್ರಾಸ್ತ್ರ ಪೂರೈಸುವಂತೆ ಭಾರತದ ಗಡಿಯೊಳಗೆ ಕಳುಹಿಸಿಕೊಟ್ಟಿದ್ದರು. ಇದೀಗ ಆತ ಮತ್ತೆ ತನ್ನ ತಾಯಿಯ ಬಳಿಗೆ ಕರೆದುಕೊಂಡು ಹೋಗುವಂತೆ ಪಾಕಿಸ್ತಾನಿ ಹ್ಯಾಂಡ್ಲರ್ ಗಳಿಗೆ ಮನವಿ ಮಾಡುತ್ತಿದ್ದಾನೆ.
ಭಾರತೀಯ ಸೇನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆತ, ಪಾಕಿಸ್ತಾನ ಸೇನೆ, ಐಎಸ್ಐ ಭಾರತದ ವಿರುದ್ಧ ಕಾರ್ಯಾಚರಿಸಲು ತನಗೆ ಯಾವ ರೀತಿ ತರಬೇತಿ ನೀಡಿದೆ ಎಂಬುದನ್ನು ವಿವರಿಸಿದ್ದಾನೆ.
“ಭಾರತೀಯ ಸೇನೆಯು ರಕ್ತಪಾತ ಮಾಡುತ್ತಿದೆ ಎಂದು ನಮಗೆ ಹೇಳಲಾಗಿತ್ತು ಆದರೆ ಇಲ್ಲಿ ಎಲ್ಲವೂ ಶಾಂತಿಯುತವಾಗಿದೆ. ಭಾರತೀಯ ಸೇನೆಯು ನನ್ನನ್ನು ಉತ್ತಮವಾಗಿ ನೋಡಿಕೊಂಡಿದೆ ಎಂದು ನನ್ನ ತಾಯಿಯ ಬಳಿ ನನಗೆ ಹೇಳಿಕೊಳ್ಳಬೇಕಿದೆ” ಎಂದಿದ್ದಾನೆ.
“ಇಲ್ಲಿ ನಾನು ದಿನಕ್ಕೆ ಐದು ಬಾರಿ ಲೌಡ್ ಸ್ಪೀಕರ್ ಮೂಲಕ ಆಝಾನ್ ಕೇಳುತ್ತಿದ್ದೇನೆ. ಭಾರತೀಯ ಸೇನೆಯ ವರ್ತನೆ ಪಾಕಿಸ್ಥಾನ ಸೇನೆಗಿಂತ ತೀರಾ ಭಿನ್ನ. ಇದು ನನಗೆ ಕಾಶ್ಮೀರದಲ್ಲಿ ಶಾಂತಿ ಇದೆ ಎಂಬ ಭಾವನೆಯನ್ನು ಮೂಡಿಸುತ್ತದೆ” ಎಂದಿದ್ದಾನೆ.
ಪಾಕಿಸ್ಥಾನ, ಐಎಸ್ಐ ಮತ್ತು ಲಷ್ಕರ್ ಉಗ್ರ ಸಂಘಟನೆಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಆತ ಹೇಳಿದ್ದಾನೆ.
ಸೆಪ್ಟೆಂಬರ್ 18 ಮತ್ತು 19 ರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಒಳನುಸುಳಲು ಪ್ರಯತ್ನಿಸಿದ ಉಗ್ರರ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಒಬ್ಬ ಹತನಾಗಿದ್ದಾನೆ ಮತ್ತು ಇನ್ನೊಬ್ಬ ಸೆರೆಯಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.