ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ದೊಡ್ಡಮಟ್ಟದ ಒಳನುಸುಳುವಿಕೆ ಸಂಚನ್ನು ವಿಫಲಗೊಳಿಸುವ ಭಾರತೀಯ ಸೇನೆಯು ಇಂದು ಮೂವರು ಪಾಕಿಸ್ಥಾನ ಮೂಲದ ಭಯೋತ್ಪಾದಕರನ್ನು ಸಂಹಾರ ಮಾಡಿದೆ. ಗಡಿ ನಿಯಂತ್ರಣ ಪ್ರದೇಶದ ರಾಂಪುರ ವಲಯದ ಉರಿ ಸಮೀಪ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಈ ಮೂವರು ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಇತ್ತೀಚಿಗೆ ಭಾರತದೊಳಗೆ ಮೂವರಲ್ಲಿ ಒಬ್ಬಾತ ಪಾಕಿಸ್ತಾನಿ ಎಂಬುದು ತಿಳಿದುಬಂದಿದೆ. ಉಳಿದವರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಾಗಿದೆ.
ಹತರಾದವರು ಬಳಿಯಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ. ಇದರಲ್ಲಿ ಐದು ಎಕರೆ 47 ಗನ್, 8 ಪಿಸ್ತೂಲ್, 70 ಹ್ಯಾಂಡ್ ಗ್ರೆನೇಡ್ ಸೇರಿದೆ. ಈ ಮೂಲಕ ಈ ವರ್ಷ ಕಾಶ್ಮೀರದಿಂದ ಒಟ್ಟು 97 ಪಿಸ್ತೂಲ್ಗಳನ್ನು ವಶಪಡಿಸಿದಂತಾಗಿದೆ.
“ರಾಂಪುರ ವಲಯದ ಹತ್ಲಂಗ ಅರಣ್ಯದಲ್ಲಿ ಉಗ್ರರ ಚಲನವಲನ ಕಂಡುಬಂದಿದೆ. ಬಳಿಕ ಬೃಹತ್ ಕಾರ್ಯಾಚರಣೆಯನ್ನು ನಡೆಸಿ ಮೂವರು ಉಗ್ರರನ್ನು ಸಂಹಾರ ಮಾಡಲಾಗಿದೆ” ಎಂದು ಚಿನಿವಾರ್ ಕಾರ್ಪ್ಸ್ನ ಕಮಾಂಡರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.