ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 71 ನೇ ಜನ್ಮದಿನವಾದ ಇಂದಿನಿಂದ ಬಿಜೆಪಿ 20 ದಿನಗಳ ಬೃಹತ್ ಸಾರ್ವಜನಿಕ ತಲುಪುವಿಕೆ ಅಭಿಯಾನವನ್ನು ಆರಂಭಿಸಲಿದೆ. ಸಾರ್ವಜನಿಕ ಜೀವನದಲ್ಲಿ ಅವರ 20 ವರ್ಷಗಳ ಸ್ಮರಣೀಯ ಸಾರ್ವಜನಿಕ ಬಾಂಧವ್ಯ ಸ್ಮರಿಸುವ ಅಭಿಯಾನ ಅಕ್ಟೋಬರ್ 7 ರವರೆಗೆ ಮುಂದುವರಿಯಲಿದೆ.
ಬಿಜೆಪಿ ತನ್ನ “ಸೇವೆ ಮತ್ತು ಸಮರ್ಪಣ” ಅಭಿಯಾನದ ಭಾಗವಾಗಿ ಪ್ರಧಾನಿ ಮೋದಿಯವರ ಜನ್ಮದಿನದಂದು ಕೋವಿಡ್ -19 ಲಸಿಕೆ ಹಾಕಲು ಅನುಕೂಲ ಮಾಡಿಕೊಡುವಂತೆ ದೇಶದಾದ್ಯಂತದ ತನ್ನ ಕಾರ್ಯಕರ್ತರಿಗೆ ನಿರ್ದೇಶನ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಗುರುವಾರ ಈ ಬಗ್ಗೆ ಟ್ವಿಟ್ ಮಾಡಿದ್ದು, ಲಸಿಕಾ ಅಭಿಯಾನಕ್ಕೆ ಪ್ರಮುಖ ಉತ್ತೇಜನ ನೀಡುವಂತೆ ಕರೆ ನೀಡಿದ್ದಾರೆ. ಇದು ಹುಟ್ಟುಹಬ್ಬದಂದು ಮೋದಿಗೆ ಪರಿಪೂರ್ಣ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.
“ನಾಳೆ ನಮ್ಮ ಪ್ರೀತಿಯ ಪ್ರಧಾನಮಂತ್ರಿಯವರ ಜನ್ಮದಿನ, ಲಸಿಕೆ ಹಾಕಿಸದ ಎಲ್ಲಾ ಜನರಿಗೆ, ತಮ್ಮ ಪ್ರೀತಿಪಾತ್ರರಿಗೆ, ಕುಟುಂಬ ಸದಸ್ಯರು ಮತ್ತು ಸಮಾಜದ ಎಲ್ಲಾ ವರ್ಗದವರಿಗೂ ಲಸಿಕೆ ಹಾಕಿಸುವ ಮೂಲಕ ಸಹಾಯ ಮಾಡಲು #VaccineSeva ಮಾಡೋಣ. ಇದು ಪ್ರಧಾನ ಮಂತ್ರಿಯವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿದೆ” ಎಂದಿದ್ದಾರೆ.
“ಪ್ರಧಾನ ಮಂತ್ರಿ ಅವರಿಗೆ ಜನರನ್ನು ರಕ್ಷಿಸುವುದಕ್ಕಿಂತ ವಿಶೇಷವಾದದ್ದು ಯಾವುದು. ಹಗಲಿರುಳು ಜನರನ್ನು ರಕ್ಷಿಸುಲ ಸಲುವಾಗಿ ಅವರು ಶ್ರಮಿಸುತ್ತಿದ್ದಾರೆ. ನಮ್ಮ ಬಳಿ ಎರಡು ಕೋವಿಡ್ ಲಸಿಕೆಗಳಿವೆ ಮತ್ತು ಇದರಿಂದ ಮಾರಕ ಸಾಂಕ್ರಾಮಿಕ ರೋಗದಿಂದ ನಾವು ನಾಗರಿಕರನ್ನು ರಕ್ಷಿಸಲು ಸಾಧ್ಯವಾಗಿದೆ. ಇದು ಹೆಮ್ಮೆಯ ವಿಷಯವಾಗಿದೆ. ಜನರನ್ನು ಕೋವಿಡ್ನಿಂದ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಶ್ರಮಿಸಿದ ಪಿಎಂ ಮೋದಿಗೆ ಸೂಕ್ತ ಗೌರವ ಸಲ್ಲಿಸಿ ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಹೇಳಿದರು.
ಪಕ್ಷದ ಕಾರ್ಯಕರ್ತರು ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಿದ್ದಾರೆ, ಹೆಚ್ಚುವರಿಯಾಗಿ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಅಭಿಯಾನದ ಭಾಗವಾಗಿ ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲು ಮತ್ತು ಬಡವರಿಗೆ ಪಡಿತರ ವಿತರಣೆಗಾಗಿ ದೇಶದಾದ್ಯಂತ ಪಕ್ಷದ ಕಾರ್ಯಕರ್ತರಿಗೆ ವಿವರವಾದ ಸೂಚನೆಗಳನ್ನು ನೀಡಿದ್ದಾರೆ.
2014 ರಲ್ಲಿ ಮೋದಿ ಪ್ರಧಾನಿಯಾದ ನಂತರ, ಬಿಜೆಪಿ ಅವರ ಹುಟ್ಟುಹಬ್ಬವನ್ನು ‘ಸೇವಾ ದಿವಸ್’ ಎಂದು ಆಚರಿಸುತ್ತಿದೆ ಮತ್ತು ಒಂದು ವಾರ ದೇಶದಾದ್ಯಂತ ಕಲ್ಯಾಣ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಆದರೆ ಈ ಬಾರಿ 20 ದಿನಗಳಿಗೆ ವಿಸ್ತರಿಸಲಾಗಿದೆ
14 ಕೋಟಿ ಪಡಿತರ ಚೀಲಗಳನ್ನು ಕೂಡ ವಿತರಿಸಲಾಗುತ್ತಿದೆ. ವರದಿಗಳ ಪ್ರಕಾರ, ಮೋದಿಯವರ ಚಿತ್ರಗಳನ್ನು ಮುದ್ರಿಸಲಾದ 14 ಕೋಟಿಗೂ ಹೆಚ್ಚು ಪಡಿತರ ಚೀಲಗಳನ್ನು ಅಭಿಯಾನದಡಿ ಅಗತ್ಯವಿರುವವರಿಗೆ ವಿತರಿಸಲಾಗುತ್ತಿದೆ.
ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ನೇತೃತ್ವದ ಎಲ್ಜೆಪಿ ಬಣವು ಮೋದಿಯವರ ಜನ್ಮದಿನವನ್ನು ಬಡವರಿಗೆ ಆಹಾರ ವಿತರಿಸುವ ಮೂಲಕ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಆಚರಿಸುತ್ತದೆ.
ಇಷ್ಟು ಮಾತ್ರವಲ್ಲದೆ, ಪಕ್ಷವು ಐದು ಕೋಟಿ ಪೋಸ್ಟ್ಕಾರ್ಡ್ಗಳನ್ನು ಕಳುಹಿಸಲಿದೆ. ದೇಶಾದ್ಯಂತ ದ ಬಿಜೆಪಿ ಬೂತ್ ಕಾರ್ಯಕರ್ತರು ಮೋದಿಗೆ ಕಳುಹಿಸಲಿದ್ದಾರೆ. ಸಾರ್ವಜನಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತೇವೆ ಎಂಬುದನ್ನು ಎತ್ತಿ ತೋರಿಸಲು ಪೋಸ್ಟ್ ಕಾರ್ಡ್ ಕಳುಹಿಸಿದ್ದಾರೆ.
ಮೋದಿ ಸ್ವೀಕರಿಸಿದ ಉಡುಗೊರೆಗಳ ಹರಾಜನ್ನು ಪ್ರಚಾರ ಮಾಡುವಂತೆ ಪಕ್ಷವು ಕಾರ್ಯಕರ್ತರನ್ನು ಕೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.