ರಾಯ್ಪರ: ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ ಅವರು ಶುಕ್ರವಾರ ರೈತರ ಸಿರಿ ಧಾನ್ಯ ಬೆಳೆಗಳಿಗೆ ಸರಿಯಾದ ಬೆಲೆ ನೀಡುವ ಉದ್ದೇಶದಿಂದ ‘ಮಿಲ್ಲೆಟ್ ಮಿಷನ್’ ಅನ್ನು ಪ್ರಾರಂಭಿಸಿದರು. ಈ ಉಪಕ್ರಮವು ಛತ್ತೀಸಗಢವನ್ನು ಭಾರತದ ಮಿಲ್ಲೆಟ್ ಕೇಂದ್ರವನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಆಶಿಸಿದ್ದಾರೆ.
ಮಿಲ್ಲೆಟ್ ಮಿಷನ್ ಇನ್ಪುಟ್ ಬೆಂಬಲವನ್ನು ನೀಡುತ್ತದೆ, ಖರೀದಿ ವ್ಯವಸ್ಥೆಗಳನ್ನು ರಚಿಸುತ್ತದೆ ಮತ್ತು ಬೆಳೆಗಳ ಸಂಸ್ಕರಣೆಯಲ್ಲಿ ರೈತರಿಗೆ ಸಹಾಯ ಮಾಡುತ್ತದೆ.
2023 ರ ವೇಳೆಗೆ ಛತ್ತೀಸಗಢವನ್ನು ದೇಶದ ಮಿಲ್ಲೆಟ್ ಕೇಂದ್ರವಾಗಿ ಗುರುತಿಸುವಂತೆ ಮಾಡುವಲ್ಲಿ ಉಪಕ್ರಮ ಯಶಸ್ವಿಯಾಗುತ್ತದೆ” ಎಂದು ಅವರು ಹೇಳಿದರು.
ಉಪಕ್ರಮದ ಭಾಗವಾಗಿ ಸಿಎಂ ಹೈದರಾಬಾದಿನ ಭಾರತೀಯ ರಾಗಿ ಸಂಶೋಧನಾ ಸಂಸ್ಥೆ (ಐಐಎಂಆರ್) ಮತ್ತು ಕಂಕರ್, ಕೊಂಡಗಾಂವ್, ಬಸ್ತಾರ್, ದಾಂತೇವಾಡ, ಬಿಜಾಪುರ, ಸುಕ್ಮಾ, ನಾರಾಯಣಪುರ, ಸೇರಿದಂತೆ 14 ಛತ್ತೀಸಗಡಢ ಜಿಲ್ಲೆಗಳ ಸಂಗ್ರಾಹಕರ ನಡುವಣ ಒಪ್ಪಂದಕ್ಕೆ ಸಹಿ ಹಾಕಿದರು.
ಐಐಎಂಆರ್ ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ನೆರವು ಮತ್ತು ಸಲಹೆಗಳನ್ನು ನೀಡಲಿದೆ ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.
ಐಐಎಂಆರ್ ಛತ್ತೀಸ್ಗಢ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಲಭ್ಯತೆ ಮತ್ತು ಬೀಜ ಬ್ಯಾಂಕುಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.