ಶ್ರೀನಗರ: ಪ್ರಸಿದ್ಧ ತೇಲುವ ಉದ್ಯಾನಗಳು ಮತ್ತು ತೇಲುವ ಅಂಚೆ ಕಚೇರಿಯ ನಂತರ ಇದೀಗ ಶ್ರೀನಗರದ ದಾಲ್ ಸರೋವರವು ತನ್ನ ಮೊದಲ ತೇಲುವ ATM ಅನ್ನು ಪಡೆದಿದೆ. ಸರೋವರದ ಸಮೀಪ ವಾಸಿಸುವ ಜನರಿಗೆ ಹಾಗೂ ಹೌಸ್ ಬೋಟ್ಗಳಲ್ಲಿ ತಂಗುವ ಪ್ರವಾಸಿಗರಿಗೆ ಸಹಾಯ ಮಾಡಲು ಎಟಿಎಂ ಅನ್ನು ಆರಂಭಿಸಲಾಗಿದೆ.
ಎಟಿಎಂ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪಿಸಿದೆ. ಇದು ಮತ್ತೊಂದು ಪ್ರವಾಸಿ ಆಕರ್ಷಣೆಯಾಗುವ ಸಾಧ್ಯತೆಯಿದೆ ಏಕೆಂದರೆ ಇದು ಕೇಂದ್ರಾಡಳಿತ ಪ್ರದೇಶದ ಏಕೈಕ ತೇಲುವ ಎಟಿಎಂ ಆಗಿದೆ.
“ಸ್ಥಳೀಯರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಎಸ್ಬಿಐ ಶ್ರೀನಗರದ ದಾಲ್ ಸರೋವರದಲ್ಲಿ ಹೌಸ್ ಬೋಟ್ನಲ್ಲಿ ಎಟಿಎಂ ಅನ್ನು ತೆರೆದಿದೆ. ಜನಪ್ರಿಯ ದಾಲ್ ಸರೋವರದಲ್ಲಿ ತೇಲುತ್ತಿರುವ ಎಟಿಎಂ ದೀರ್ಘಕಾಲದ ಅಗತ್ಯವನ್ನು ಪೂರೈಸುತ್ತದೆ ಮತ್ತು ಇದು ಶ್ರೀನಗರದ ಆಕರ್ಷಣೆಯನ್ನು ಹೆಚ್ಚಿಸಲಿದೆ “ಎಂದು ಬ್ಯಾಂಕ್ ಟ್ವೀಟ್ ಮಾಡಿದೆ.
ಹೌಸ್ಬೋಟ್ಗಳಲ್ಲಿ ವಾಸಿಸುವ ಜನರು ಹಣವನ್ನು ವಿದ್ಡ್ರಾ ಮಾಡಲು ಮುಖ್ಯ ನಗರಕ್ಕೆ ಹೋಗಬೇಕಾಗಿರುವುದರಿಂದ ತೇಲುವ ಎಟಿಎಂ ಒಂದು ಮಹತ್ವದ ನಿರ್ಧಾರವಾಗಿದೆ.ಪ ದೋಣಿಗಳಲ್ಲಿ ಉಳಿಯಲು ಬಯಸುವ ಪ್ರವಾಸಿಗರಿಗೂ ಈ ಎಟಿಎಂ ಅನುಕೂಲಕರವಾಗಿದೆ.
“ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕೃತಜ್ಞರಾಗಿರುತ್ತೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಮೊದಲ ತೇಲುವ ಎಟಿಎಂ ಆಗಿದೆ. ಇದರಿಂದ ಸ್ಥಳೀಯರಿಗೆ ಹಾಗೂ ಕಣಿವೆಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇದು ಒಂದು ವಿಶಿಷ್ಟ ಪರಿಕಲ್ಪನೆಯಾಗಿರುವುದರಿಂದ ಇದು ಪ್ರವಾಸಿ ಆಕರ್ಷಣೆಯಾಗಬಹುದು. ಇದು ನಮ್ಮ ವ್ಯಾಪಾರಕ್ಕೂ ಪ್ರಯೋಜನಕಾರಿಯಾಗಿದೆ. ವಿವಿಧ ಹೌಸ್ಬೋಟ್ಗಳಲ್ಲಿರುವ ಎಲ್ಲಾ ಪ್ರವಾಸಿಗರು ಸಹ ಈ ಹೆಜ್ಜೆಯನ್ನು ಮೆಚ್ಚುತ್ತಿದ್ದಾರೆ, ”ಎಂದು ಹೌಸ್ಬೋಟ್ ಹೊಂದಿರುವ ಸಕೀಬ್ ಇಬ್ರಾಹಿಂ ಹೇಳಿದ್ದಾರೆ.
ಈ ಬೇಸಿಗೆಯಲ್ಲಿ ಕಣಿವೆಯು ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಆಗಮನವನ್ನು ಕಾಣಲಿದ್ದು, ಹೆಚ್ಚಿನ ಹೌಸ್ಬೋಟ್ಗಳು ಮತ್ತು ಹೋಟೆಲ್ಗಳನ್ನು ಬುಕ್ ಮಾಡಲಾಗಿದೆ. ಹೌಸ್ ಬೋಟ್ ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ತೇಲುವ ಎಟಿಎಂ ಅನುಕೂಲ ಮಾಡಿಕೊಡಲಿದೆ.
ಕೇರಳದಲ್ಲಿ ತೇಲುವ ಎಟಿಎಂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.