ನವದೆಹಲಿ: ಉತ್ತರಪ್ರದೇಶ ಸರ್ಕಾರವು ಶುಕ್ರವಾರ ಮಥುರಾ- ವೃಂದಾವನ ನಗರ ನಿಗಮದ 22 ವಾರ್ಡ್ಗಳನ್ನು ಪವಿತ್ರ ತಾಣಗಳು ಎಂದು ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧವಾಗಲಿದೆ.
ಮಥುರಾ ಮತ್ತು ಬೃಂದಾವನ ಶ್ರೀಕೃಷ್ಣನ ಜನ್ಮಸ್ಥಳ ಮತ್ತು ಕ್ರಿಯಾ ಸ್ಥಳವಾಗಿದೆ. ಈ ಸ್ಥಳಗಳ ಪವಿತ್ರತೆಯ ಹಿನ್ನೆಲೆಯಲ್ಲಿ ದೇಶಾದ್ಯಂತದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಪೂಜಾಕೈಂಕರ್ಯ ನೆರವೇರಿಸುತ್ತಾರೆ. ಪುರಾಣದಲ್ಲೂ ಈ ಸ್ಥಳಗಳಿಗೆ ಮಹತ್ವವನ್ನು ನೀಡಲಾಗಿದೆ. ಅಲ್ಲದೆ ಪ್ರವಾಸೋದ್ಯಮದ ಕೇಂದ್ರವೂ ಆಗಿದೆ.
ಮಥುರಾ ಮತ್ತು ಬೃಂದಾವನಗಳಲ್ಲಿ ಒಟ್ಟು 70 ವಾರ್ಡುಗಳು ಇವೆ. ಇವುಗಳಲ್ಲಿ 22 ವಾರ್ಡ್ಗಳನ್ನು ಪವಿತ್ರ ತಾಣವಾಗಿ ಘೋಷಿಸಲಾಗಿದೆ. ಘಾಟಿ ಬಹಲ್ ರಾಯ್, ಗೋವಿಂದ್ ನಗರ್, ಮಂಡಿ ರಾಮದಾಸ್, ಚೌಬಿಯ ಪುಡಿ, ದ್ವಾರಕಪುರಿ, ನವನೀತ್ ನಗರ್, ವನ್ಖಂಡಿ, ಭರತ್ಪೂರ್ ಗೇಟ್, ಹನುಮಾನ್ ಪುರಿ, ಜಗನ್ನಾಥ್ ಪುರಿ ಮುಂತಾದ ವಾರ್ಡುಗಳನ್ನು ಪವಿತ್ರ ತಾಣಗಳಾಗಿ ಘೋಷಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.