ನವದೆಹಲಿ: ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 5 ಚಿನ್ನ ಮತ್ತು 8 ಬೆಳ್ಳಿ ಸೇರಿದಂತೆ ಐತಿಹಾಸಿಕ 19 ಪದಕಗಳನ್ನು ಗೆದ್ದ ಭಾರತದ ಪ್ಯಾರಾ ಅಥ್ಲೀಟ್ ಗಳನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಸನ್ಮಾನಿಸಿದರು.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮತ್ತು ಕೇಂದ್ರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಖಾತೆ ಸಚಿವ ನಿಸಿತ್ ಪ್ರಮಾಣಿಕ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆಯ ಕಾರ್ಯದರ್ಶಿ ರವಿ ಮಿತ್ತಲ್, ಇಲಾಖೆಯ ಯುವ ವ್ಯವಹಾರಗಳ ಕಾರ್ಯದರ್ಶಿ ಉಷಾ ಶರ್ಮಾ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾಷಣದ ವೇಳೆ ಅನುರಾಗ್ ಠಾಕೂರ್ ಅವರು ಅದ್ಭುತ ಪ್ರದರ್ಶನಕ್ಕಾಗಿ ಎಲ್ಲಾ ಪ್ಯಾರಾ ಅಥ್ಲೀಟ್ಗಳನ್ನು ಅಭಿನಂದಿಸಿದರು ಮತ್ತು “ನಾನು 2016 ರ ಪ್ಯಾರಾಲಿಂಪಿಕ್ಸ್ ನೆನಪಿಸಿಕೊಳ್ಳುತ್ತೇನೆ. ಅಲ್ಲಿ ಭಾರತೀಯ ತಂಡವು 19 ಜನರನ್ನು ಒಳಗೊಂಡಿತ್ತು. ಆದರೆ ಈ ವರ್ಷ ದೇಶವು 19 ಪದಕಗಳನ್ನು ಗೆದ್ದಿದೆ. ಮಾನವ ಚೈತನ್ಯವು ಎಲ್ಲಕ್ಕಿಂತ ಶಕ್ತಿಶಾಲಿಯಾಗಿದೆ ಎಂದು ನಮಗೆ ಇದು ತೋರಿಸಿದೆ. ನಮ್ಮ ಪದಕದ ಸಂಖ್ಯೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. ಮೊದಲ ಬಾರಿಗೆ ನಾವು ಟೇಬಲ್ ಟೆನಿಸ್ನಲ್ಲಿ ಪದಕಗಳನ್ನು ಗೆದ್ದಿದ್ದೇವೆ, ಬಿಲ್ಲುಗಾರಿಕೆಯಲ್ಲಿ ಬಹು ಪದಕಗಳನ್ನು ಗೆದ್ದಿದ್ದೇವೆ, ಕ್ಯಾನೋಯಿಂಗ್ ಮತ್ತು ಪವರ್ಲಿಫ್ಟಿಂಗ್ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದೇವೆ. ನಾವು ಎರಡು ವಿಶ್ವ ದಾಖಲೆಗಳನ್ನು ಸಮಗಟ್ಟಿದ್ದೇವೆ ಮತ್ತು ನಾವು ಇನ್ನೂ ಹೆಚ್ಚಿನ ದಾಖಲೆ ಮುರಿದಿದ್ದೇವೆ” ಎಂದಿದ್ದಾರೆ.
“ಅಂತರಾಷ್ಟ್ರೀಯ ಸ್ಪರ್ಧೆಗಳಿಗಾಗಿ ಕ್ರೀಡಾಪಟುಗಳಿಗೆ ಬೆಂಬಲವನ್ನು ನೀಡುವಲ್ಲಿ ಸರ್ಕಾರದ ವಿಧಾನವು ಪರಿವರ್ತನೆಗೆ ಒಳಗಾಗಿದೆ. ಸರ್ಕಾರವು ಭಾರತದ ಪ್ಯಾರಾಲಿಂಪಿಯನ್ಗಳಿಗೆ ಸೌಲಭ್ಯಗಳು ಮತ್ತು ಧನಸಹಾಯದೊಂದಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಇದರಿಂದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.