ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಂದಾಯ ಸಂಗ್ರಹಣಾ ದೃಷ್ಟಿಯಿಂದ ಸಶಸ್ತ್ರ ಪಡೆಗಳಿಗೆ ಹಣಕಾಸು ಅಧಿಕಾರಗಳನ್ನು ನಿಯೋಜಿಸಲು ಅನುಮೋದನೆ ನೀಡಿದ್ದಾರೆ.
ಫೀಲ್ಡ್ ಕಮಾಂಡರ್ಗಳು ಮತ್ತು ಅವರ ಕೆಳಗಿನ ಅಧಿಕಾರಿಗಳಿಗೆ ತುರ್ತು ಅಗತ್ಯತೆಯ ಸಂದರ್ಭದಲ್ಲಿ, ಅವಶ್ಯಕತೆ ಇರುವ ಸಲಕರಣೆಗಳು, ಯುದ್ಧದ ಅಗತ್ಯತೆಗಳನ್ನು ತ್ವರಿತವಾಗಿ ನೆರವೇರಿಸಿಕೊಳ್ಳಲು ಆರ್ಥಿಕ ಅಧಿಕಾರವನ್ನು ನೀಡುವ ದೃಷ್ಟಿಯಿಂದ ಈ ಅನುಮೋದನೆಯನ್ನು ನೀಡಲಾಗಿದೆ.
ಹಾಗೆಯೇ ಸರ್ವೀಸ್ ಚೀಫ್ಗಳಿಗೆ ನಿಯೋಜಿತ ಹಣಕಾಸು ಅಧಿಕಾರವನ್ನು 10% ಗೆ ಏರಿಕೆ ಮಾಡಲಾಗಿದೆ. ರಕ್ಷಣಾ ಸೇವೆಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮಹತ್ವದ ಬದಲಾವಣೆಗಳನ್ನು 2016 ರಲ್ಲಿ ಮಾಡಲಾಗಿತ್ತು. ಇದೀಗ ಆರ್ಥಿಕ ಅಧಿಕಾರಕ್ಕೆ ಅನುಮೋದನೆ ನೀಡುವ ಮೂಲಕ ಮತ್ತೊಮ್ಮೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ.
ಈ ಬಗ್ಗೆ ಮಾತನಾಡಿರುವ ರಾಜನಾಥ್ ಸಿಂಗ್, ದೇಶದ ಭದ್ರತಾ ಮೂಲಸೌಕರ್ಯಗಳನ್ನು ಬಲಪಡಿಸಲು ಸರ್ಕಾರ ಕೈಗೊಳ್ಳುತ್ತಿರು ಈ ಕ್ರಮ ಅತ್ಯಂತ ದೊಡ್ಡ ಹೆಜ್ಜೆಯಾಗಿದೆ. ಸಶಸ್ತ್ರ ಪಡೆಗಳ ಅಗತ್ಯತೆಯನ್ನು ತ್ವರಿತವಾಗಿ ಪೂರೈಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ಮಹತ್ವ ಪಡೆದಿದೆ. ಇದು ವಿಳಂಬ ನೀತಿಯನ್ನು ನಿವಾರಿಸುತ್ತದೆ. ಜೊತೆಗೆ ಹೆಚ್ಚು ಕಾರ್ಯ ದಕ್ಷತೆಗೂ ಅನುಕೂಲ ಒದಗಿಸುತ್ತದೆ. ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಆತ್ಮನಿರ್ಭರ ಕಲ್ಪನೆಯಡಿಯಲ್ಲಿ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದ್ದು, ಅದರ ಅನುಸಾರ ಇಂತಹ ಮಹತ್ವದ ನಿರ್ಣಯಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.