ನವದೆಹಲಿ: ಭಾರತ-ಚೀನಾ ಗಡಿಯನ್ನು ರಕ್ಷಿಸಲು ನಿಯೋಜಿತಗೊಂಡಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಗಳು ತಮ್ಮ ವ್ಯಾಪ್ತಿಗಳನ್ನು ಮೀರಿ ಕಾರ್ಯ ಮಾಡುತ್ತಿವೆ.
ಪರ್ವತದಲ್ಲಿ ನದಿ ಉಕ್ಕಿ ಹರಿದ ಪರಿಣಾಮ ಸುಮಾರು ಏಳು ಗಂಟೆಗಳ ಕಾಲ 12,000 ಅಡಿಗಳಷ್ಟು ಎತ್ತರದಲ್ಲಿ ಸಿಲುಕಿದ್ದ ನಾಲ್ಕು ಗ್ರಾಮಸ್ಥರನ್ನು ಐಟಿಬಿಪಿ ಪಡೆಗಳು ರಕ್ಷಿಸಿವೆ. ಸೆ.1ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಐಟಿಬಿಪಿಯ 14 ನೇ ಬೆಟಾಲಿಯನ್ ಸಿಬ್ಬಂದಿ ಗ್ರಾಮಸ್ಥರನ್ನು ರಕ್ಷಿಸಿದ್ದಾರೆ. ಮಿಲಂ ಹಳ್ಳಿಯ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ರಕ್ಷಿಸಲ್ಪಟ್ಟವರಲ್ಲಿ ಸೇರಿದ್ದಾರೆ.
ಉತ್ತರಾಖಂಡದ ಮಿಲಂ ಬಳಿ ಈ ಘಟನೆ ನಡೆದಿದೆ. ಈ ಜನರು ಗಂಟೆಗಟ್ಟಲೆ ಪರ್ವತ ನದಿಗೆ ಅಡ್ಡಲಾಗಿ ಸಿಲುಕಿಕೊಂಡಿದ್ದರು ಎಂದು ಐಟಿಬಿಪಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳೀಯರು ಕೆಲವು ಗಿಡಮೂಲಿಕೆಗಳನ್ನು ಸಂಗ್ರಹಿಸಲು ಹೋದ ಸಂದರ್ಭದಲ್ಲಿ ನದಿ ಉಕ್ಕಿ ಹರಿದ ಪರಿಣಾಮ ಪರ್ವತದ ಮೇಲೆ ಸಿಕ್ಕಿಹಾಕಿಕೊಂಡಿದ್ದಾರೆ. ಐಟಿಬಿಪಿ ಸಿಬ್ಬಂದಿ ಇವರನ್ನು ರಕ್ಷಿಸಲು ಹಗ್ಗವನ್ನು ಬಳಸಿದ್ದಾರೆ ಎನ್ನಲಾಗಿದೆ.
ITBP personnel of 14th Battalion rescued 4 locals near Milam, Pithoragarh, Uttarakhand from an altitude of 12,000 feet. These people were stranded across a mountain river for hours.#Himveers#SentinelsOfTheHimalayas pic.twitter.com/86qVCYSVPm
— ITBP (@ITBP_official) September 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.