ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಸುಲ್ತಾನ್ಪುರದ ಹೆಸರನ್ನು ಕುಶ ಭವನ ಪುರ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆಸಿದೆ.
ಈ ಬಗ್ಗೆ ಸುಲ್ತಾನ್ಪುರದ ನಗರಸಭೆಯ ಅಧ್ಯಕ್ಷೆ ಬಬಿತಾ ಜೈಸ್ವಾಲ್ ಅವರು ಮಾತನಾಡಿದ್ದು, ಹೆಸರು ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ 2018 ರ ಜನವರಿ 6 ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿತ್ತು. ಆ ಬಳಿಕ ಅದನಿ ಸಿಎಂ ಯೋಗಿ ನೇತೃತ್ವದ ರಾಜ್ಯ ಸರ್ಕಾರಕ್ಕೂ ಕಳುಹಿಸಲಾಗಿತ್ತು. ಹಾಗೆಯೇ ಕಳೆದ ಮೂರು ತಿಂಗಳ ಹಿಂದೆ ಸಿಎಂ ಯೋಗಿ ಅವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿಯೂ ಅವರಿಗೆ ಸ್ಥಳನಾಮ ಬದಲಾಯಿಸುವಂತೆ ಸಾರ್ವಜನಿಕರ ಪರ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.
ಇದೀಗ ಇದಕ್ಕೆ ಪೂರಕ ಎಂಬಂತೆ ಕಂದಾಯ ಮಂಡಳಿಯು ಇದಕ್ಕೆ ಅನುಮತಿ ನೀಡಿದೆ. ಮುಸ್ಲಿಂ ದಾಳಿಗೊಳಗಾದಾಗ ಈ ಪ್ರದೇಶಕ್ಕೆ ಸುಲ್ತಾನ್ಪುರ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಈ ಪ್ರದೇಶಕ್ಕೆ ಇದೀಗ ಕುಶ ಭವನಪುರ ಎಂದು ನಾಮಕರಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಈ ನೂತನ ಹೆಸರಿಗೆ ಐತಿಹಾಸಿಕ ಹಿನ್ನೆಲೆಯೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.