ತಿರುಪತಿ: ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಾಲಯದ ಪ್ರಸಾದ ನೀಡಲು ಜೈವಿಕ ಚೀಲವೊಂದನ್ನು ಡಿಆರ್ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿ ಮಾಡಿದೆ.
ಈವರೆಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಪ್ಲಾಸ್ಟಿಕ್ ಚೀಲದಲ್ಲಿ ಪ್ರಸಾದಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಮುಂದಿನ ದಿನಗಳಲ್ಲಿ ಪರಿಸರಕ್ಕೆ ಯಾವುದೇ ಹಾನಿ ಉಂಟುಮಾಡದ ಜೈವಿಕ ಚೀಲಗಳನ್ನು ದೇವಾಲಯ ಒದಗಿಸಲಿದೆ.
ದೇವಸ್ಥಾನದ ಲಡ್ಡು ಪ್ರಸಾದ ವಿತರಣೆ ಮಾಡುವ ಕೌಂಟರ್ ಬಳಿ ಟಿಟಿಡಿಯು ಈ ಚೀಲಗಳನ್ನು ಮಾರಾಟ ಮಾಡಲಿದೆ. ಪ್ರಸಾದ ಪಡೆಯುವ ಭಕ್ತರು ಈ ಚೀಲಗಳನ್ನು ಕೌಂಟರ್ನಿಂದ ಖರೀದಿ ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಡಿಆರ್ಡಿಒ ಮಾಹಿತಿ ನೀಡಿದ್ದು, ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಜೈವಿಕ ಚೀಲಗಳನ್ನು ಸಿದ್ಧಪಡಿಸಲಾಗಿದೆ. ಈ ಬ್ಯಾಗ್ ಪರಿಸರದಲ್ಲಿ 90 ದಿನಗಳೊಳಗೆ ಕರಗುತ್ತದೆ. ಹಾಗೆಯೇ ಜಾನುವಾರುಗಳು ತಿಂದರೂ ಹಾನಿಕಾರಕವಲ್ಲ. ಇದೀಗ ತಿರುಪತಿ ದೆಗುಲಕ್ಕೆ ಇದನ್ನು ಒದಗಿಸಲಾಗಿದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.