ನವದೆಹಲಿ: ದೇಶದ 63 ತರಬೇತಿ ಕೇಂದ್ರಗಳಲ್ಲಿ ಕುಶಲಕರ್ಮಿಗಳಿಂದ ನಡೆದ ತರಬೇತಿ ಕಾರ್ಯಕ್ರಮಗಳಿಂದ 1500 ಕ್ಕೂ ಅಧಿಕ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಜವಳಿ ಸಚಿವಾಲಯವು ತಿಳಿಸಿದೆ.
ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಕುಶಲಕರ್ಮಿಗಳ ಸಾಮರ್ಥ್ಯ ನಿರ್ವಹಣೆಗಾಗಿ ಸಮರ್ಥ ಯೋಜನೆಗಳನ್ನು ಸಚಿವಾಲಯವು ಜಾರಿಗೊಳಿಸುತ್ತಿದೆ. ಜವಳಿ ಮತ್ತು ಅದಕ್ಕೆ ಸಂಬಂಧಪಟ್ಟ ವಲಯಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವ ಸಲುವಾಗಿ ಸಚಿವಾಲಯವು ಈ ಪ್ರಯತ್ನಗಳನ್ನು ಮಾಡುತ್ತಿದೆ. ಬೇಡಿಕೆ ಆಧರಿತ ಕೌಶಲ್ಯಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕುಶಲಕರ್ಮಿಗಳನ್ನು ಸ್ವಾವಲಂಬಿಗಳನ್ನಾಗಿ ಖಾತ್ರಿಪಡಿಸಲು, ಅವರ ಒಟ್ಟಾರೆ ಅಭಿವೃದ್ಧಿಗಾಗಿ ಸಚಿವಾಲಯವು ಈ ಉಪಕ್ರಮ ಕೈಗೊಂಡಿದೆ. ಸುಸ್ಥಿರ ಜೀವನೋಪಾಯ ಸಕ್ರಿಯಗೊಳಿಸಲು ಸಮರ್ಥ ಯೋಜನೆಯಡಿ ತಾಂತ್ರಿಕ ಮತ್ತು ಮೃದು ಕೌಶಲ್ಯ ತರಬೇತಿ ನೀಡುವ ಮೂಲಕ ಕುಶಲಕರ್ಮಿಗಳನ್ನು ತಯಾರಿ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.