ವಿಶಾಖಪಟ್ಟಣ: ಜಪಾನ್ನಲ್ಲಿ ನಡೆದ ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು, ಕೀರ್ತಿ ತಂದುಕೊಟ್ಟ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಅವರು ವಿಶಾಖಪಟ್ಟಣದಲ್ಲಿ ಕ್ರೀಡಾ ಅಕಾಡೆಮಿ ಮತ್ತು ತರಬೇತಿ ಕೇಂದ್ರ ಆರಂಭಿಸುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ ಅವರೊಂದಿಗೆ ಸಿಂಧು ಮಾತನಾಡಿದ್ದು, ತಾವು ಆರಂಭಿಸಲಿರುವ ಕ್ರೀಡಾ ಅಕಾಡೆಮಿ ಮತ್ತು ತರಬೇತಿ ಕೇಂದ್ರವನ್ನು ತಮ್ಮ ತಂದೆ ಮುಂದುವರೆಸಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿ ಅವರ ಜೊತೆಗಿನ ಸಂವಾದ ಸದಾ ನನ್ನ ಸ್ಮರಣೆಯಲ್ಲಿರಲಿದೆ. ಈ ಸಂವಾದದಲ್ಲಿ ದೇಶದಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆ ಮತ್ತು ತಂಡಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿರುವುದಾಗಿ ಬರೆದುಕೊಂಡಿದ್ದಾರೆ.
ಈ ಸಂವಾದದ ಸಂದರ್ಭದಲ್ಲಿ ಸಿಂಧು ಜೊತೆಗೆ ಅವರ ಕೋಚ್ ಸೌತ್ ಕೊರಿಯಾ ಮೂಲದ ಪಾರ್ಕ್ ಟಿ ಸಾಂಗ್ ಸಹ ಉಪಸ್ಥಿತರಿದ್ದರು.
This will always be a very special interaction with Hon’ble PM @narendramodi ji for me. As I’m overwhelmed by the support, I was happy to discuss how I can also support badminton in India with him, along with an exceptional team of people 🙏🏽 pic.twitter.com/XBD2evhzXz
— Pvsindhu (@Pvsindhu1) August 18, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.