ನವದೆಹಲಿ: ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಅಡಿಯಲ್ಲಿ 2 ಕೋಟಿ ಚಿಕಿತ್ಸೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಆರೋಗ್ಯ ಧಾರಾ – 2.0 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯಡಿ 2 ಕೋಟಿಗೂ ಅಧಿಕ ಆಸ್ಪತ್ರೆಯ ದಾಖಲು ಚಿಕಿತ್ಸೆ ಪೂರ್ಣಗೊಂಡಿದ್ದು, ಯೋಜನೆಯಡಿ ದೇಶದ 33 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ರೋಗಿಗಳಿಗೆ 2018.ರ ಸೆಪ್ಟೆಂಬರ್ನಿಂದ ಈವರೆಗೆ 23,000 ಸಾರ್ವಜನಿಕ ಮತ್ತು ಖಾಸಗಿ ಆಯ್ದ ಆಸ್ಪತ್ರೆಗಳ ವರ್ಧಿತ ಜಾಲಕ್ಕೆ ಈವರೆಗೆ ಅಂದಾಜು 25,000 ಕೋಟಿ ರೂ. ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ಹಾಗೆಯೇ ಈ ಸಾಧನೆಯನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬ ಉದ್ಯೋಗಿಗೂ ಅವರು ಅಭಿನಂದನೆ ಸಲ್ಲಿಸಿದರು.
ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಬಡ ಮತ್ತು ಹಿಂದುಳಿದ ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯು ಎಲ್ಲಾ ಅರ್ಹ ಫಲಾನುಭವಿಗಳಿಗೆ ನಗದು ರಹಿತ ಮತ್ತು ಕಾಗದರಹಿತ ಆರೋಗ್ಯ ಸೇವೆಗಳ ಪ್ರಯೋಜನಗಳನ್ನು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಒದಗಿಸುತ್ತಿದೆ. ಹೀಗಾಗಿ, ಅನೇಕ ಅನುಕೂಲಸ್ಥರಲ್ಲದ ಕುಟುಂಬವರ್ಗಗಳು ಚಿಕಿತ್ಸೆವೆಚ್ಚಕ್ಕಾಗಿ ಲೇವಾದೇವಿದಾರರ ಬಳಿ ಹೋಗದೆ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯೆಡೆಗಿನ ಪಯಣದ ಮೇಲೆ ದೃಢವಾದ ರಾಜಕೀಯ ಬದ್ಧತೆಯ ಕುರಿತಂತೆ, ಪ್ರಧಾನ ಮಂತ್ರಿಯವರ ಬಡತನದ ಹಿನ್ನೆಲೆಯು ಬಡವರು ಮತ್ತು ಅಸಹಾಯಕರ ನೋವನ್ನು ಅರಿಯಲು ಅನುವು ಮಾಡಿದೆ ಎಂದು ಉಲ್ಲೇಖಿಸಿದರು. ಈ ಯೋಜನೆಯ ಅಡಿಯಲ್ಲಿ ಸಾಮಾನ್ಯ ಜನರಿಗೆ ಅಗತ್ಯವಾದ ವೈದ್ಯಕೀಯ ಸೇವೆಯನ್ನು ವಿಸ್ತರಿಸಲು ಸಾಧ್ಯವಾಗುವಂತೆ ಹೆಚ್ಚು ಹೆಚ್ಚು ಜನರು ನೋಂದಾಯಿಸಿಕೊಳ್ಳವಂತೆ ಮಾಡಲು ಯೋಜನೆಯ ಕುರಿತಂತೆ ತಿಳಿಸಲು ಅವರು ಈ ಸಂದರ್ಭವನ್ನು ಬಳಸಿಕೊಂಡರು.
ಅವರು ಎಂ.ಬಿ.ಪಿ.ಎಂ. ಜೆ.ಎ.ವೈ. ಕಾರ್ಯಕ್ರಮದ ವ್ಯಾಪ್ತಿಯನ್ನು ದೇಶದ ಬಡ ಕುಟುಂಬಗಳಿಗೆ ತಲುಪಿಸಲು ಮತ್ತು ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸಲು ಆರೋಗ್ಯ ಧಾರಾ 2.0 ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಹಾಗೆಯೇ ಅಧಿಕಾರ ಪತ್ರ, ಅಭಿನಂದನಾ ಪತ್ರ, ಆಯುಷ್ಮಾನ್ ಮಿತ್ರ ಮೊದಲಾದ ಉಪಕ್ರಮಗಳಿಗೂ ಅವರು ಚಾಲನೆ ನೀಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.