ನವದೆಹಲಿ: ದೇಶದ 75 ನೇ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಐಸಿಸಿಆರ್ ( ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ) ಆಯೋಜಿಸಿರುವ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಚಾಲನೆ ನೀಡಿದರು.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಐಸಿಸಿಆರ್ ಮುಖ್ಯ ಕಚೇರಿಯಲ್ಲಿ ಅಮೃತ ಮಹೋತ್ಸವದ ಭವ್ಯ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಐತಿಹಾಸಿಕ ಕ್ಷಣಕ್ಕೆ ಇದು ಸೂಕ್ತ ಆಚರಣೆ. ಸ್ವತಂತ್ರ ರಾಷ್ಟ್ರವಾಗಿ 75 ವರ್ಷದಲ್ಲಿ ನಾವು 100 ನೇ ವರ್ಷದ ಸ್ವಾತಂತ್ರ್ಯ ಸಂದರ್ಭದಲ್ಲಿ ಎಲ್ಲಿ ತಲುಪುತ್ತೇವೆ ಎಂಬುದನ್ನು ಕಲ್ಪಿಸುವ ಆರಂಭಿಕ ಬಿಂದುವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾವು ಆಗಸ್ಟ್ 15 ರಂದು ಐತಿಹಾಸಿಕ ಮೈಲಿಗಲ್ಲು ತಲುಪಲಿದ್ದೇವೆ. ನಿಸ್ಸಂಶಯವಾಗಿ ಈ ಕ್ಷಣವನ್ನು ನಾವು ಸಂಭ್ರಮಿಸುತ್ತೇವೆ. ಹಾಗೆಯೇ ಇದು ಆತ್ಮಾವಲೋಕನ ಮತ್ತು ಹೊಸ ಸಂಕಲ್ಪವನ್ನು ಮಾಡುವ ಕ್ಷಣವೂ ಆಗಿದೆ ಎಂದು ತಿಳಿಸಿದ್ದಾರೆ.
Inaugurated @iccr_hq’s #AmritMahotsav Gala Performance. A fitting celebration of a historic milestone.
75th year as a free nation is the starting point to envision where we will be on our centenary. pic.twitter.com/yhWg7t8wwl
— Dr. S. Jaishankar (@DrSJaishankar) August 13, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.