ನವದೆಹಲಿ: ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ಆಜಾದ್ ಕಿ ಅಮೃತ ಮಹೋತ್ಸವ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಅಭಿಯಾನಕ್ಕೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನವದೆಹಲಿಯ ಧ್ಯಾನ್ಚಂದ್ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.
ಕ್ರೀಡಾ ಸಚಿವರು ಈ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಓಟ ದೇಶದ 75 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭವಾಗಿದೆ. ಅಕ್ಟೋಬರ್ 2 ರ ಗಾಂಧೀ ಜಯಂತಿ ವರೆಗೆ ಈ ಅಭಿಯಾನ ಮುಂದುವರಿಯಲಿದೆ. ಪ್ರತಿ ಜಿಲ್ಲೆಯ 75 ಗ್ರಾಮಗಳು ಇದರಲ್ಲಿ ಭಾಗಿಯಾಗಲಿವೆ ಎಂದು ಅವರು ಹೇಳಿದ್ದಾರೆ.
ಹಾಗೆಯೇ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಿಂದ 100 ನೇ ವರ್ಷಕ್ಕೆ ಹೋಗುವ ನಡುವಿನ 25 ವರ್ಷಗಳಲ್ಲಿ ನಾವು ದೇಶವನ್ನು ಯಾವ ರೀತಿಯ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಬಯಸುತ್ತೇವೆ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ನಾವು ಫಿಟ್ ಆಗಿದ್ದಲ್ಲಿ ಮಾತ್ರ ದೇಶವನ್ನು ಸದೃಢವಾಗಿರಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಈ ಅಭಿಯಾನ ಅಕ್ಟೋಬರ್ 2 ರ ವರೆಗೆ ನಡೆಯಲಿದ್ದು, ಈ ಬಾರಿ 7.5 ಕೋಟಿ ಜನರು ನಮ್ಮ. ಜೊತೆ ಭಾಗಿಯಾಗಲಿದ್ದಾರೆ. ಅಭಿಯಾನ ಅಂತ್ಯಗೊಳ್ಳುವ ಹಂತದಲ್ಲಿ ಮತ್ತಷ್ಟು ಜನರು ನಮ್ಮ ಜೊತೆಗೆ ಭಾಗಿಗಳಾಗಲಿದ್ದಾರೆ ಎಂದು ಅನುರಾಗ್ ಹೇಳಿದ್ದಾರೆ.
मैं भारत की स्वतंत्रता के 75 वर्ष-
'आजादी का अमृत महोत्सव' के उपलक्ष्य में ‘फिट इंडिया फ्रीडम रन 2.0' में हिस्सा लेने का संकल्प लेता/लेती हूँ..#AzadiKaAmritMahotsav #Run4India@Nyksindia @IndiaSports @FitIndiaOff pic.twitter.com/gql1E4117j— Anurag Thakur (@ianuragthakur) August 13, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.