ನವದೆಹಲಿ: ಮೂಲಸೌಕರ್ಯ ಅಭಿವೃದ್ಧಿ ದೇಶದ ಪ್ರಗತಿಗೆ ಅತ್ಯಗತ್ಯವಾಗಿದೆ ಮತ್ತು ಹೆದ್ದಾರಿ ನಿರ್ಮಾಣದಲ್ಲಿ ದಿನಕ್ಕೆ 100 ಕಿಮೀ ವೇಗವನ್ನು ಸಾಧಿಸುವುದು ತನ್ನ ಗುರಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ ವರ್ಚುವಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ವಿಳಂಬ ಮಾಡುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿ ದೇಶಕ್ಕೆ ಬಹಳ ಮುಖ್ಯವಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿಯೂ ಸಹ, ನಾವು ದಿನವೊಂದಕ್ಕೆ 38 ಕಿಮೀ ರಸ್ತೆಯನ್ನು ನಿರ್ಮಿಸುವ ವಿಶ್ವ ದಾಖಲೆಯನ್ನು ಮಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಹೆದ್ದಾರಿ ನಿರ್ಮಾಣದ ವೇಗವು 2020-21ರಲ್ಲಿ ದಿನಕ್ಕೆ 37 ಕಿಮೀ ದಾಖಲೆಯನ್ನು ಮುಟ್ಟಿದೆ. ಆದರೂ ಪ್ರಸ್ತುತ ಕಾರ್ಯಕ್ಷಮತೆಯ ಬಗ್ಗೆ ನನಗೆ ತೃಪ್ತಿ ಇಲ್ಲ. ನಿರ್ಮಾಣದಲ್ಲಿ ದಿನಕ್ಕೆ 100 ಕಿಮೀ ವೇಗವನ್ನು ಸಾಧಿಸುವುದು ನಮ್ಮ ಗುರಿಯಾಗಿದೆ. ಕ್ಷಿಪ್ರಗತಿಯ, ಫಲಿತಾಂಶ ಆಧಾರಿತ, ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ಹೊಂದಿರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಡೀಸೆಲ್ ಇಂಧನದ ಬದಲಿಗೆ ಹಸಿರು ಇಂಧನ ಬಳಸಲು ಒತ್ತು ನೀಡುವಂತೆ ಕರೆ ನೀಡಿದ ಅವರು, ಗುತ್ತಿಗೆದಾರರಿಗೆ ಎಥೆನಾಲ್, ಸಿಎನ್ಜಿ ಮುಂತಾದ ಹಸಿರು ಇಂಧನಗಳನ್ನು ನಿರ್ಮಾಣ ಸಲಕರಣೆಗಳಲ್ಲಿ ಬಳಸುವಂತೆ ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.