ಬೆಂಗಳೂರು: ಸೈಕಲ್ ಫಾರ್ ಚೇಂಜ್ ಚಾಲೆಂಜ್ನ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ಟಾಪ್ 11 ಸೈಕ್ಲಿಂಗ್ ಪ್ರವರ್ತಕ ಪ್ರಶಸ್ತಿ ಪಟ್ಟಿಯನ್ನು ಮಾಡಿದ್ದು, ಇದರಲ್ಲಿ ಬೆಂಗಳೂರು ಸಹ ಸ್ಥಾನ ಪಡೆದಿದೆ.
ಆಯ್ಕೆಯಾದ ನಗರಗಳಲ್ಲಿ ತಮ್ಮ ಸೈಕ್ಲಿಂಗ್ ಉಪಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಲಾ 1 ಕೋಟಿ ರೂ. ಗಳನ್ನು ನೀಡಲಾಗುತ್ತದೆ. 2020 ರ ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವ ಸೈಕ್ಲಿಂಗ್ ಉತ್ತೇಜನಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಸುಮಾರು 107 ನಗರಗಳು ದೇಶದ ಸೈಕ್ಲಿಂಗ್ ಕ್ರಾಂತಿಯನ್ನು ಕಿಕ್ಸ್ಟಾರ್ಟ್ ಮಾಡುವ, ವಿಭಿನ್ನ ಸೈಕ್ಲಿಂಗ್ ಸ್ನೇಹಿ ಉಪಕ್ರಮಗಳನ್ನು ಪರೀಕ್ಷಿಸಲು, ಕಲಿಯುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದಾಗಿ ಕಾರ್ಯ ನಿರ್ವಹಿಸಿದ್ದವು ಎಂದು ಕೇಂದ್ರ ತಿಳಿಸಿದೆ.
2021 ರ ಆರಂಭದಲ್ಲಿ ಈ ಪಟ್ಟಿಗಾಗಿ 25 ನಗರಗಳ ಹೆಸರುಗಳನ್ನು ಶಾರ್ಟ್ಲೀಸ್ಟ್ ಮಾಡಲಾಗಿತ್ತು. ಆ ಬಳಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಾರಿಗೆ ತಜ್ಞರನ್ನು ಒಳಗೊಂಡ ತೀರ್ಪುಗಾರರ ತಂಡ 11 ನಗರಗಳನ್ನು ಆಯ್ಕೆ ಮಾಡಿತು. ಇದರಲ್ಲಿ ಭುವನೇಶ್ವರ, ಚಂಢೀಘಡ, ನಾಗ್ಪುರ, ಮಹಾರಾಷ್ಟ್ರದ ಪಿಂಪ್ರಿ ಚಿಂಚವಾಡ್, ಸೂರತ್, ವಡೋದರಾ, ರಾಜ್ ಕೋಟ್ಗಳು ಸೇರಿವೆ. ಅಗ್ರ 11 ನಗರಗಳಲ್ಲಿ ಆಯ್ಕೆಯಾದ ಏಕೈಕ ದೊಡ್ಡ ನಗರ ಬೆಂಗಳೂರು ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.