ಶ್ರೀನಗರ: ಪ್ರಜಾಪ್ರಭುತ್ವ ವ್ಯವಸ್ಥೆಗೆ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಕ್ರೋಢೀಕರಿಸಿ ಉತ್ತಮವಾದುದನ್ನು ಹೊರತರುವ ಸಾಮರ್ಥ್ಯ ಇದೆ ಎಂದು ಕಾಶ್ಮೀರದ ಜನತೆಗೆ ಈಗ ಮನದಟ್ಟಾಗುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದ್ದಾರೆ.
ಅವರು ರಾಜ್ಯದ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ಶಾಂತಿ, ಸಹಬಾಳ್ವೆ ಗೆ ಹೆಸರಾಗಿದ್ದ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿರುವುದು ದುರಾದೃಷ್ಟ. ಇಂತಹ ಘಟನೆಗಳಿಂದ ಕಾಶ್ಮೀರ ಹೊರತಾಗಿತ್ತು. ಆದರೆ ಪ್ರಸ್ತುತ ಹಿಂಸಾಚಾರ ನಡೆಯುವುದು ನಿತ್ಯದ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂಸಾ ಪ್ರವೃತ್ತಿ ಕಾಶ್ಮೀರಕ್ಕೆ ಹೊರಗಿನಿಂದ ನುಸುಳಿದೆ. ಈ ಹಿಂಸಾಚಾರವನ್ನು ದಮನಿಸುವ ಅಗತ್ಯ ಇದೆ. ಕಾಶ್ಮೀರ ಹಲವು ಸಂಸ್ಕೃತಿಗಳ ಸಂಗಮದ ತಾಣವಾಗಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಹೊಸ ಕ್ರಮಗಳು ಸಾಕ್ಷಿಯಾಗಿವೆ. ಕಣಿವೆ ರಾಜ್ಯದಲ್ಲಿ ಕಳೆದು ಹೋದ ವೈಭವವನ್ನು ಮತ್ತೆ ಕ್ರೋಢೀಕರಿಸುವ ಹೊಸ ಪ್ರಯತ್ನಗಳು ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.