ನವದೆಹಲಿ: ದೇಶಾದ್ಯಂತ ಆಚರಿಸಲಾಗುವ ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಗುರು ಪೂರ್ಣಿಮೆಯ ಈ ಪಾವನ ದಿನದ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
गुरु पूर्णिमा के पावन अवसर पर देशवासियों को हार्दिक बधाई।
— Narendra Modi (@narendramodi) July 24, 2021
ಆಷಾಢ ಪೂರ್ಣಿಮೆಯ ಧರ್ಮ ಚಕ್ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಎಲ್ಲರಿಗೂ ಧರ್ಮಚಕ್ರ ಪ್ರವರ್ತನ ದಿವಸದ ಶುಭಾಶಯಗಳು. ಇಂದು ನಾವು ಗುರುಪೂರ್ಣಿಮೆಯನ್ನು ಆಚರಿಸುತ್ತೇವೆ ಹಾಗೂ ಇದೇ ದಿನದಂದು ಭಗವಾನ್ ಬುದ್ಧನು ಬುದ್ಧತ್ವವನ್ನು ಪಡೆದು ಜಗತ್ತಿಗೆ ಮೊದಲ ಜ್ಞಾನವನ್ನು ಕೊಟ್ಟ ದಿನ. ಎಲ್ಲಿ ಜ್ಞಾನವಿದೆಯೇ ಅದೇ ಪೂರ್ಣಿಮೆ ಎನ್ನಲಾಗುತ್ತದೆ ಎಂದು ಭಗವಾನ್ ಬುದ್ಧನ ಕುರಿತು ಹೇಳಿದರು.
ಇಂದು ಜಗತ್ತು ಕೋವಿಡ್-19 ಸಾಂಕ್ರಾಮಿಕದಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಗವಾನ್ ಬುದ್ಧನ ಬೋಧನೆಗಳು ಪ್ರಸ್ತುತವೆನಿಸುತ್ತವೆ. ಬುದ್ಧ ತೋರಿಸಿದ ಹಾದಿಯಲ್ಲೇ ಸಾಗಿ ಇಂದು ದೇಶ ಸಂಕಷ್ಟದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದೆ. ಸಂಕಷ್ಟದ ಸಮಯದಲ್ಲಿ ಅನೇಕ ರಾಷ್ಟ್ರಗಳು ಒಗ್ಗಟ್ಟಾಗಿ ನಿಂತು ಪರಸ್ಪರ ಸಹಕಾರ ತೋರಿವೆ ಎಂದು ಮೋದಿ ಹೇಳಿದರು.
PM Shri @narendramodi's message at the Ashadha Purnima-Dhamma Chakra Day programme. https://t.co/P3a1dFt6UU
— BJP (@BJP4India) July 24, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.