ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ದತ್ತಾಂಶಗಳ ವಿಚಾರವಾಗಿ ವಾದ ವಿವಾದಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೊರೋನಾ ಸಾವಿನ ಪ್ರಕರಣಗಳನ್ನು ಕೈಬಿಡದೆ ಪಾರದರ್ಶಕವಾಗಿ ವರದಿಯನ್ನು ನೀಡುವಂತೆ ಕೇಂದ್ರ ಸರ್ಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕೊರೋನಾ ಸಾವುಗಳಿಗೆ ಸಂಬಂಧಿಸಿದಂತೆ ದಾಖಲೆಗಾಗಿ ಡಬ್ಲ್ಯೂಎಚ್ಒ ಶಿಫಾರಸ್ಸು ಮಾಡಿರುವ ಐಸಿಡಿ-10 ಕೋಡ್ಗಳನ್ನು ಆಧರಿಸಿದ ಐಸಿಎಂಆರ್ನ ಮಾರ್ಗಸೂಚಿಗಳನ್ನು ದೇಶ ಅನುಸರಿಸುತ್ತದೆ. ಈ ವರೆಗೆ ದೇಶದಲ್ಲಿ ಸುಮಾರು 4 ಲಕ್ಷ ಸಾವುಗಳು ಕೊರೋನಾ ಸೋಂಕಿನಿಂದ ಸಂಭವಿಸಿವೆ ಎಂದು ದೃಢಪಟ್ಟಿದೆ. ಆದರೆ ಕೊರೋನಾ ಸಾವುಗಳ ಸಂಖ್ಯೆ 25 -50 ಲಕ್ಷಗಳ ನಡುವೆ ಇದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಸಂಶೋಧಕರ ಅಂದಾಜಿನ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದ್ದು, ಯುಎಸ್, ಯುರೋಪಿರನ್ ರಾಷ್ಟ್ರಗಳಲ್ಲಿ ಇತ್ತೀಚಿನ ಅಧ್ಯಯನ, ಆವಿಷ್ಕಾರಗಳನ್ನು ಉಲ್ಲೇಖ ಮಾಡಿಕೊಂಡು ಕೆಲವು ವರದಿಗಳು ಬಂದಿವೆ. ಇವುಗಳಲ್ಲಿ ಸೆರೊಪೊಸಿಟಿವಿಟಿ ಆಧಾರದ ಮೇಲೆ ವಯಸ್ಸು, ನಿರ್ಧಿಷ್ಟ ಸೋಂಕಿನ ಪ್ರಮಾಣವನ್ನು ಬಳಕೆ ಮಾಡಿಕೊಂಡು ದೇಶದಲ್ಲಿನ ಹೆಚ್ಚುವರಿ ಸಾವುಗಳ ಲೆಕ್ಕಾಚಾರ ಮಾಡಲಾಗುವುದು ಎಂದು ತಿಳಿಸಿದೆ. ಪ್ರಸ್ತುತ ಕೊರೋನಾ ಸೋಂಕಿನಿಂದ ಹೆಚ್ಚುವರಿ ಸಾವುಗಳು ಸಂಭವಿಸಿದೆ ಎಂಬುದು ಸತ್ಯಕ್ಕೆ ದೂರ. ಯಾವುದೇ ಕಾರಣದಿಂದ ಮರಣ ಸಂಭವಿಸಿದ್ದರೂ, ಅದನ್ನು ಕೊರೋನಾದಿಂದ ಸಾವಾಗಿದೆ ಎಂಬುದಾಗಿ ಲೆಕ್ಕಾಚಾರ ಮಾಡಲಾಗಿದೆ. ಇದು ದಾರಿತಪ್ಪಿಸುವ ಕೆಲಸ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ದೃಢವಾದ ಮತ್ತು ಕಾನೂನು ಆಧಾರಿತ ಮರಣ ನೋಂದಣಿ ವ್ಯವಸ್ಥೆ ಇದೆ. ಸಾಂಕ್ರಾಮಿಕ ರೋಗಗಳ ತತ್ವ, ನಿರ್ವಹಣೆ ಪ್ರಕಾರ ಕೆಲ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಇದರಿಂದ ಸಾವು ತಪ್ಪಿಸುವುದು ಅಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಇಡೀ ಆರೋಗ್ಯ ವ್ಯವಸ್ಥೆ ಮತ್ತು ಪ್ರಕರಣಗಳ ಮೇಲೆ ಪರಿಮಾಮಕಾರಿ ಕ್ಲಿನಿಕಲ್ ನಿರ್ವಹಣೆ, ಮೆಡಿಕಲ್ ಹೆಲ್ಪ್, ಸಮರ್ಪಕ ವರದಿಯತ್ತ ಗಮನ ಹರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.