ನವದೆಹಲಿ: ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್ಟಿ ಆದಾಯ ಕೊರತೆಯನ್ನು ಸರಿದೂಗಿಸಲು 75 ಸಾವಿರ ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಳೆದ ಮೇ 28 ರಂದು ನಡೆದಿದ್ದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಜಿಎಸ್ಟಿ ಪರಿಹಾರ ನಿಧಿಯಲ್ಲಿನ ಅಸಮರ್ಪಕ ಮೊತ್ತದ ಕಾರಣದಿಂದ ಪರಿಹಾರ ಬಿಡುಗಡೆಗಾಗಿ 1.59 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು.
ಜಿಎಸ್ಟಿ ಪರಿಹಾರದ ಬದಲಾಗಿ ಬ್ಯಾಕ್ ಟು ಬ್ಯಾಕ್ ಸಾಲ ಸೌಲಭ್ಯದಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಹಣಕಾಸು ಸಚಿವಾಲಯ 75 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಸೆಸ್ ಸಂಗ್ರಹದಿಂದ ಎರಡು ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್ಟಿ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿರುವುದಾಗಿ ಸಚಿವಾಲಯದ ಮೂಲಗಳು ತಿಳಿಸಿವೆ. ಬಾಕಿ ಮೊತ್ತವನ್ನು 2021-22 ರ ಎರಡನೇ ಅವಧಿಯ ಕಂತುಗಳಲ್ಲಿ ಬಿಡುಗಡೆ ಮಾಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಈಗ ಬಿಡುಗಡೆ ಮಾಡಲಾಗಿರುವ 75,000 ಕೋಟಿ ರೂ.ಹಣವನ್ನು 5 ವರ್ಷಗಳ ಭದ್ರತೆಯೊಂದಿಗೆ ಭಾರತ ಸರ್ಕಾರ ಪಡೆದಿರುವ ಸಾಲದಿಂದ ನೀಡಲಾಗಿದ್ದು, ಒಟ್ಟು 68,500 ಕೋಟಿ ರೂ. ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಡುಗಡೆಯಾದ, 2 ವರ್ಷಗಳ ಭದ್ರತೆಯ 6,500 ಕೋಟಿ ರೂ. ಸೇರಿದೆ, ಅನುಕ್ರಮವಾಗಿ ವಾರ್ಷಿಕ ಶೇ. 5.60 ಮತ್ತು ಶೇ.4.25ರ ತೂಕದ ಸರಾಸರಿ ಇಳುವರಿಯಲ್ಲಿ ನೀಡಲಾಗುತ್ತದೆ.
ಈ ಬಿಡುಗಡೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇತರ ಸಂಗತಿಗಳಾದ ಅಂದರೆ ಆರೋಗ್ಯ ಮೂಲಸೌಕರ್ಯ ಸುಧಾರಣೆ ಮತ್ತು ಮೂಲಸೌಕರ್ಯ ಯೋಜನೆ ಕೈಗೆತ್ತಿಕೊಳ್ಳಲು ತಮ್ಮ ಸಾರ್ವಜನಿಕ ವೆಚ್ಚದ ಯೋಜನೆ ರೂಪಿಸಿಕೊಳ್ಳಲು ನೆರವಾಗುತ್ತದೆ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳವಾರು ಮೊತ್ತವನ್ನು ಜಿಎಸ್ಟಿ ಪರಿಹಾರದ ಕೊರತೆಯ ಬದಲಾಗಿ ಮತ್ತೆ ಮತ್ತೆ ಸಾಲಕ್ಕಾಗಿ 15.07.2021ರಂದು ಬಿಡುಗಡೆ ಮಾಡಲಾಗಿದೆ.
ಈ ಪೈಕಿ ಕರ್ನಾಟಕಕ್ಕೆ 5 ವರ್ಷಗಳ ಭದ್ರತೆಯಡಿ 7801.86 ಕೋಟಿ ರೂ ಮತ್ತು 2 ವರ್ಷದ ಅವಧಿಯ ಭದ್ರತೆಯಡಿ 740.31 ಕೋಟಿ ರೂ. ಸೇರಿ ಒಟ್ಟು 8542.17 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.