ನವದೆಹಲಿ: ಅನುವಂಶಿಕ ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿರುವ ತಮಿಳುನಾಡಿನ 2 ವರ್ಷದ ಪುಟ್ಟ ಮಗುವಿನ ಚಿಕಿತ್ಸೆಗೆ ಅವಶ್ಯವಾದ, ವಿಶ್ವದ ಅತಿ ದುಬಾರಿ ಬೆಲೆಯ ಔಷಧದ ಆಮದು ಸುಂಕವನ್ನು, ಜಿಎಸ್ಟಿಯನ್ನು ಮಾನವೀಯ ನೆಲೆಯಲ್ಲಿ ತೆರವು ಮಾಡಲು ಕೇಂದ್ರ ಮೋದಿ ಸರ್ಕಾರ ಮುಂದಾಗಿದೆ.
ಈ ಕಾಯಿಲೆಯ ಚಿಕಿತ್ಸೆಗೆ ಅಮೆರಿಕ ಮೂಲದ ಝೋಲ್ಂಗೆಸ್ಮಾ ಎಂಬ ಚುಚ್ಚುಮದ್ದು ಬೇಕಾಗಿದ್ದು, ಇದಕ್ಕೆ ಸುಮಾರು 16 ಕೋಟಿ ರೂ. ತಗುಲುತ್ತದೆ. ಇದರ ಆಮದು ಸುಂಕ, ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡುವುದಾಗಿ ಹೇಳಿದ್ದು, ಇದರಿಂದ ಇದರ ಬೆಲೆಯಲ್ಲಿ 35% ಇಳಿಕೆಯಾಗಿ ಸುಮಾರು 9 ಕೋಟಿಗೆ ದೊರೆಯುವಂತಾಗಲಿದೆ.
ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಪೋಷಕರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲ ಇಲ್ಲದೇ ಇದ್ದು, ಚಿಕಿತ್ಸೆಗಾಗಿ ಆನ್ಲೈನ್ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಲಾಗಿತ್ತು. ಜೊತೆಗೆ ತಮ್ಮ ಅಸಹಾಯಕ ಪರಿಸ್ಥಿತಿ ಅರಿತುಕೊಂಡು ಆರ್ಥಿಕ ನೆರವು ನೀಡುವಂತೆ ಸರ್ಕಾರವನ್ನು ಕೋರಿದ್ದ ಪೋಷಕರ ಸಂಕಷ್ಟಕ್ಕೆ, ಬಿಜೆಪಿಯ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ದನಿಯಾಗಿದ್ದರು. ಕುಟುಂಬದ ಸಂಕಷ್ಟವನ್ನು ಅವರು ಕೇಂದ್ರ ವಿತ್ತ ಸಚಿವಾಲಯದ ಮುಂದಿಟ್ಟಿದ್ದರು. ಈ ಮನವಿಯನ್ನು ಪುರಸ್ಕರಿಸಿ ಕಸ್ಟಮ್ಸ್ ತೆರಿಗೆ, ಜಿಎಸ್ಟಿ ವಿನಾಯಿತಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
The order passed by Finance Ministry exempting the Custom duty fee on the life saving medicine for K.S Mithra
சிறுமி மித்ராவின் சிகிச்சைக்கான மருந்தின் இறக்குமதி வரியை ரத்து செய்தது மத்திய அரசு!
நன்றி @narendramodi, @nsitharaman , @mansukhmandviya.@annamalai_k @BJP4TamilNadu pic.twitter.com/O6gft7ajXS
— Vanathi Srinivasan (@VanathiBJP) July 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.