ಮಂಗಳೂರು: ಭಾರತೀಯ ರೆಡ್ಕ್ರಾಸ್ ಸೊಸೈಟಿ, ಮೀಡಿಯಾ ಅಲುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ) ಹಾಗೂ ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕಗಳ ಸಹಯೋಗದಲ್ಲಿ ಆ.22ರಿಂದ ವಿವಿಧೆಡೆ ‘ರಕ್ತದಾನ ಅಭಿಯಾನ ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ವಿ.ವಿ.ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಎನ್ಎಸ್ಎಸ್ ಘಟಕ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಜಾಗೃತಿ ಮೂಡಿಸಿ ರಕ್ತದಾನ ಸರಣಿ ಶಿಬಿರಗಳನ್ನು ಸಂಘಟಿಸುವುದು ಅಭಿಯಾನದ ಪ್ರಮುಖ ಉzಶ. ಸರಣಿಯ ಆರಂಭಿಕ ಕಾರ್ಯಕ್ರಮ ಆ.22ರಂದು ಶನಿವಾರ ಮಂಗಳೂರು ಮಿಲಾಗ್ರಿಸ್ ಕಾಲೇಜು ಹಾಗೂ ಮಂಗಳೂರು ಲಯನ್ ಕ್ಲಬ್ ಸಹಯೋಗದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9.30ಕ್ಕೆ ಕಾಲೇಜು ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಥಮ ಶಿಬಿರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಮಿಲಾಗ್ರಿಸ್ ಕಾಲೇಜ್ ಸಂಚಾಲಕ ರೆ.ಫಾ.ವೆಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ ಮಾಮ ಅಧ್ಯಕ್ಷೆ ಫ್ಲೋರಿನ್ ರೋಚ್, ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಮಂಗಳೂರು ಘಟಕ ಅಧ್ಯಕ್ಷ ಡಾ.ರೊನಾಲ್ಡ ಅನಿಲ ಫೆರ್ನಾಂಡಿಸ್, ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ವಿನೀತಾ ಕೆ., ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರಾದ ರೆ.ಫಾ.ಮೈಕಾಲ್ ಸಾಂತು ಸಾಂತು ಮಾಯೆರ್, ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಮಮತಾ ಮತ್ತಿತರರು ಹಾಜರಿರುವರು.
ಬಳಿಕ ಕಾಲೇಜಿನಲ್ಲಿ ಸರಣಿಯ ಮೊದಲ ರಕ್ತದಾನ ಶಿಬಿರ ನಡೆಯುವುದು.
ರಕ್ತದಾನ ಅಭಿಯಾನ ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬಯಸುವವರು ಮಾಮ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು., ಸುಮಾರು 50ಕ್ಕೂ ಹೆಚ್ಚು ರಕ್ತದಾನಿಗಳನ್ನು ಹೊಂದಿರುವ ಆಸಕ್ತ ಸಂಘ ಸಂಸ್ಥೆಯವರ ಸಹಯೋಗದಲ್ಲಿ ಮಾಮ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗುವುದು. ಆಸಕ್ತರು ಮಾಮ ಪದಾಧಿಕಾರಿಗಳಾದ ಫ್ಲೋರಿನ್ ರೋಚ್(9880810329), ಕೃಷ್ಣಮೋಹನ (9481976969), ಕೃಷ್ಣಕಿಶೋರ್ (9448424922), ಅಥವಾ ಡಾ.ರೊನಾಲ್ಡ ಅನಿಲ ಫೆರ್ನಾಂಡಿಸ್ (9448480323) ಅವರನ್ನು ಸಂಪರ್ಕಿಸುವಂತೆ ಮಾಮ ಅಧ್ಯಕ್ಷೆ ಫ್ಲೋರಿನ್ ರೋಚ್ ಹಾಗೂ ಗೌರವಾಧ್ಯಕ್ಷ ವೇಣು ಶರ್ಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ೨೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಭಾಗದ ಹಳೆ ವಿದ್ಯಾರ್ಥಿಗಳು ಸೇರಿಕೊಂಡು 2014 ಡಿಸೆಂಬರ ನಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ (ಮಾಮ) ಸಂಘಟನೆ ರಚಿಸಿದ್ದಾರೆ.
ಸಂಘಟನೆ ಈಗ ಅಧಿಕೃತವಾಗಿ ನೋಂದಣಿಯಾಗಿದ್ದು ಇತ್ತೀಚೆಗಷ್ಟೇ ವಾರ್ಷಿಕ ಮಹಾಸಭೆ ನಡೆಸಿ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಕ್ರಿಯ ಘಟಕಗಳನ್ನು ಹೊಂದಿದ್ದು ವಿವಿಧ ಮಾಧ್ಯಮ ಸಂಸ್ಥೆಗಳು ಹಾಗೂ ಸ್ವಉದ್ಯೋಗ ನಿರತ ಹಳೆ ವಿದ್ಯಾರ್ಥಿಗಳು ಸಂಘಟನೆ ಸದಸ್ಯರಾಗಿzರೆ. ಮಾಧ್ಯಮ ಸಂಬಂಧ ಕಾರ್ಯಚಟುವಟಿಕೆಗಳನ್ನು ನಡೆಸುವುದು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ, ತರಬೇತಿ, ಮಾಧ್ಯಮ ಸಂಬಂಧ ಕಾರ್ಯಾಗಾರ ನಡೆಸುವುದು, ಮಾಧ್ಯಮ ಸಂಬಂಧ ಕೃತಿಗಳ ಪ್ರಕಟಣೆ ಇತ್ಯಾದಿ ಉದ್ದೇಶಗಳನ್ನು ಸಂಸ್ಥೆ ಇರಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.