News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮರದಿಂದ ಹನುಮಾನ್‌ ಚಾಲಿಸ ಕೆತ್ತಿದ ಒಡಿಶಾ ವ್ಯಕ್ತಿ, ಮೋದಿಗೆ ಗಿಫ್ಟ್‌ ನೀಡುವ ಇಚ್ಛೆ

ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯ  ಕಾಂತೇ ಕೋಲಿ ಗ್ರಾಮದ ಅರುಣ್ ಸಾಹು ಅವರು ಹನುಮಾನ್ ಚಾಲಿಸಾದ ಎರಡು ಪ್ರತಿಗಳನ್ನು ಮರದಿಂದ ಕೆತ್ತಿದ್ದಾರೆ. ಸಾಹು ಕಳೆದ 10 ವರ್ಷಗಳಿಂದ ಮರದ ಕೆತ್ತನೆಯ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ತಾಜ್‌ಮಹಲ್, ಇಂಡಿಯಾ ಗೇಟ್, ಗೇಟ್‌ವೇ ಆಫ್ ಇಂಡಿಯಾ ಮತ್ತು ಐಫೆಲ್ ಟವರ್‌ನ ಶಿಲ್ಪಗಳನ್ನು ಮರದಿಂದ ಕೆತ್ತಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣ್ ಸಾಹು, “ಲಾಕ್ ಡೌನ್ ಸಮಯದಲ್ಲಿ ನಾನು ಏನನ್ನಾದರೂ ವಿಭಿನ್ನವಾಗಿ ಮಾಡಬೇಕೆಂದು ಯೋಚಿಸಿದೆ ಮತ್ತು ಹಿಂದಿಯಲ್ಲಿ ಹನುಮಾನ್ ಚಾಲಿಸಾವನ್ನು ರಚಿಸುವ ಯೋಚನೆ ನನ್ನ ಮನಸ್ಸಿಗೆ ಬಂತು” ಎಂದಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಮರದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಅರುಣ್ ಸಾಹು ಅವರ ತಂದೆ ಭಾಸ್ಕರ್ ಸಾಹು ವೃತ್ತಿಯಲ್ಲಿ ಬಡಗಿ, ಅವರು ಮರದ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಅರುಣ್ ಕಾಲೇಜು ದಿನಗಳಿಂದಲೇ ತಂದೆಯ ಕಾರ್ಯದಲ್ಲಿ ಕೈ ಜೋಡಿಸುತ್ತಾ ಬರುತ್ತಿದ್ದಾರೆ ಮತ್ತು ತಂದೆಯ ಮಾರ್ಗದರ್ಶನದಲ್ಲಿ  ಮರದ ಕೆತ್ತನೆಗಳನ್ನು ಹೇಗೆ ಮಾಡಬೇಕೆಂದನ್ನು ಅವರು ಕಲಿತುಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top