ನವದೆಹಲಿ: ಇಂದು 10 ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿನ ಕೋವಿಡ್ ವಿರೋಧಿ ಹೋರಾಟದ ಸನ್ನದ್ಧತೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಗ್ರಾಮೀಣ ಭಾರತವು ಕೋವಿಡ್ ಮುಕ್ತವಾಗುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವರ್ಚುವಲ್ ಸಭೆಯಲ್ಲಿ 10 ರಾಜ್ಯಗಳ ಜಿಲ್ಲಾ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಗ್ರಾಮೀಣ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು, ಇದರಿಂದ ಗ್ರಾಮಗಳಲ್ಲಿ ಕೋವಿಡ್ ಹರಡುವುದನ್ನು ತಡೆಯಬಹುದು ಎಂದಿದ್ದಾರೆ.
ಲಸಿಕೆಗಳನ್ನು ವ್ಯರ್ಥ ಮಾಡಬಾರದು ಎಂದು ಪ್ರಧಾನಿ ಕರೆ ನೀಡಿದರು.
“ಲಸಿಕೆಯ ಒಂದು ಡೋಸ್ ವ್ಯರ್ಥವಾದರೂ ಕೂಡ ಒಬ್ಬ ವ್ಯಕ್ತಿಯು ರೋಗ ರಕ್ಷಣೆಯಿಂದ ವಂಚಿತನಾಗಿದ್ದಾನೆ ಎಂದರ್ಥ. ಹೀಗಾಗಿ ಲಸಿಕೆ ವ್ಯರ್ಥವಾಗುವುದನ್ನು ನಿಲ್ಲಿಸುವುದು ಬಹಳ ಮುಖ್ಯ” ಎಂದು ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ರೋಗವು ದೈನಂದಿನ ಜೀವನದ ಮೇಲೆ ಬೀರುತ್ತಿರುವ ಪರಿಣಾಮವನ್ನು ಎತ್ತಿ ತೋರಿಸಿದ ಪಿಎಂ ಮೋದಿ, “ಜೀವ ಉಳಿಸುವಷ್ಟೇ ಜೀವನ ಸುಲಭತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಜಿಲ್ಲೆಗಳು ಬಡವರಿಗೆ ಉಚಿತ ಪಡಿತರ, ಇತರ ಪ್ರಮುಖ ವಸ್ತುಗಳ ತಡೆರಹಿತ ಪೂರೈಕೆ, ಕಪ್ಪು ಮಾರುಕಟ್ಟೆ ತಡೆಗಟ್ಟುವಿಕೆ ಇತ್ಯಾದಿಗಳನ್ನು ಖಚಿತಪಡಿಸಬೇಕು. ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧವನ್ನು ಗೆಲ್ಲಲು ಇವೆಲ್ಲವೂ ಬಹಳ ಮುಖ್ಯ” ಎಂದು ಹೇಳಿದರು.
“ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ, ನಮ್ಮ ಕಾರ್ಯತಂತ್ರಗಳು ಸಹ ಕ್ರಿಯಾತ್ಮಕವಾಗಿರಬೇಕು. ಮೊದಲ ಕಾರ್ಯದಿಂದ ನೀವು ಪಡೆಯುವ ಅನುಭವವು ಪ್ರಾಯೋಗಿಕ ಮತ್ತು ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ” ಎಂದು ಪ್ರಧಾನಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.