ನವದೆಹಲಿ: ಕರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆ ವಿರುದ್ಧ ಇಡೀ ದೇಶ ಒಗ್ಗಟ್ಟಿನ ಹೋರಾಟವನ್ನು ನಡೆಸುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮಾತ್ರ ತನ್ನ ರಾಜಕೀಯ ಬೇಳೆ ಬೇಯಿಸುವುದರಲ್ಲಿ ಬ್ಯೂಸಿ ಆಗಿದೆ.
ಕೊರೋನಾವೈರಸ್ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ಸರ್ಕಾರ ಮತ್ತು ಭಾರತವನ್ನು ಅವಮಾನಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಬಗೆಗೆ ಅದು ತಯಾರಿಸಿರುವ ಟೂಲ್ ಕಿಟ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ವಕ್ತಾರ ಸಂಬೀತ್ ಪಾತ್ರ ಅವರು, “ಸಾಂಕ್ರಾಮಿಕವನ್ನು ಬಳಸಿ ತನ್ನನ್ನು ಬಲಿಷ್ಟಗೊಳಿಸಲು ಕಾಂಗ್ರೆಸ್ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಟೂಲ್ ಕಿಟ್ ತೋರಿಸುತ್ತಿದೆ. ಇದು ಆ ಪಕ್ಷದ ಉದ್ದೇಶ ಮತ್ತು ದೇಶದಲ್ಲಿ ತಪ್ಪು ಮಾಹಿತಿಯನ್ನು ಹಂಚುವ ಪ್ರಯತ್ನಗಳನ್ನು ಬಹಿರಂಗಪಡಿಸಿದೆ” ಎಂದಿದ್ದಾರೆ.
ಹಲವು ವಿಧಗಳನ್ನು ಬಳಸಿ ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿಯವರ ಘನತೆಗೆ ಧಕ್ಕೆ ತರುವ ಪ್ರಯತ್ನವನ್ನು ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
“ಬಿಕ್ಕಟ್ಟನ್ನು ಎದುರಿಸುವಲ್ಲಿ ನರೇಂದ್ರ ಮೋದಿಯವರ ಅಸಮರ್ಥತೆಯನ್ನು ಬಿಜೆಪಿ ಮತ್ತು ಮೋದಿ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ ಎಂಬಂತೆ ಬಿಂಬಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಸಂಪನ್ಮೂಲವನ್ನು ಬಳಸಿ. ವಿದೇಶಿ ಮಾಧ್ಯಮಗಳನ್ನು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿ ಎಂದು ಟೂಲ್ಕಿಟ್ನಲ್ಲಿ ಉಲ್ಲೇಖವಿದೆ. ಅಂತರಾಷ್ಟ್ರೀಯ ಮಾಧ್ಯಮಗಳನ್ನು ಗಮನಿಸಿದಾಗ ಇದು ಕಂಡುಬರುತ್ತದೆ. ಇದರ ಹಿಂದೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಇರುವುದು ಸ್ಪಷ್ಟವಾಗಿದೆ” ಎಂದು ಸಂಬೀತ್ ಪಾತ್ರ ಆರೋಪಿಸಿದ್ದಾರೆ.
ಹರಿದ್ವಾರದ ಕುಂಭಮೇಳ ‘ಕೊರೋನಾವೈರಸ್ ಸೂಪರ್ ಸ್ಪ್ರೆಡರ್’ ಎಂಬುದನ್ನು ಪದೇ ಪದೇ ಹೇಳಿ ಜನರಿಗೆ ಮನವರಿಕೆ ಮಾಡುವಂತೆ, ಆದರೆ ಯಾವುದೇ ಕಾರಣ ಕ್ಕೂ ಈದ್ ಅನ್ನು ಈ ವಿಷಯದಲ್ಲಿ ಎಳೆದು ತೆರೆದಂತೆ ಟೂಲ್ಕಿಟ್ನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹೇಗೆ ತನ್ನ ಬೇಳೆ ಬೇಯಿಸುವ ಕಾರ್ಯದಲ್ಲಿ ನಿರತವಾಗಿದೆ ಎಂಬುದನ್ನು ಟೂಲ್ ಕಿಟ್ ಬಹಿರಂಗಪಡಿಸಿದೆ.
Toolkits are not alien to the Congress and their eco-system. Infact, a substantial part of their energy goes into making them. Here is a toolkit on the Central Vista…they make one Toolkit of the other every week and when exposed, they "deny" it. #CongressToolkitExposed pic.twitter.com/fsR8VZUOov
— Sambit Patra (@sambitswaraj) May 18, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.