ನವದೆಹಲಿ : ಕೋವಿಡ್ ರೆಸ್ಪಾನ್ಸ್ ಟೀಮ್ ನವದೆಹಲಿ ವತಿಯಿಂದ ಕೊರೋನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರಣಿ ಉಪನ್ಯಾಸ ಮಾಲಿಕೆ ‘ಪಾಸಿಟಿವಿಟಿ ಅನ್ಲಿಮಿಟೆಡ್’ ನ ಮೊದಲ ಉಪನ್ಯಾಸ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ಜಗತ್ತು ಯುದ್ಧದಂತಹ ಪರಿಸ್ಥಿತಿ ಎದುರಿಸುತ್ತಿದೆ. ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ಈ ಯುದ್ಧವನ್ನು ಒಗ್ಗಟ್ಟಿನಿಂದ ಮಾತ್ರವೇ ಗೆಲ್ಲುವುದು ಸಾಧ್ಯ. ಇಂತಹ ವ್ಯತಿರಿಕ್ತ ಸನ್ನಿವೇಶದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಮುಖ್ಯವಲ್ಲ. ಇದನ್ನು ನಿರ್ವಹಿಸುವ ಬಗ್ಗೆ ಗಮನ ಹರಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವುದರತ್ತ ನಮ್ಮ ಗಮನ ಇರಬೇಕು. ಒಬ್ಬರನ್ನೊಬ್ಬರು ಬೊಟ್ಟು ಮಾಡುವ ಬದಲು ಒಂದು ರಾಷ್ಟ್ರವಾಗಿ, ಒಂದು ಮಾನವತೆಯಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಇದು ಎಚ್ಚರದಿಂದ ಇರುವ ಸಮಯ. ನಮ್ಮ ಮನಸ್ಸು ಮತ್ತು ದೇಹವನ್ನು ಆರೋಗ್ಯದಿಂದ ಇರಿಸಿಕೊಳ್ಳೋಣ. ಈ ಪರಿಸ್ಥಿತಿ ನಿಭಾಯಿಸುವ ಮೂಲಕ ವಿಶ್ವಕ್ಕೆ ಉದಾಹರಣೆಯಾಗಿ ನಿಲ್ಲೋಣ. ಇದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ಮತ್ತೆ ಅತ್ಯುತ್ತಮ ಸ್ಥಿತಿಗೆ ತೆರಳುತ್ತೇವೆ ಎಂದು ನುಡಿದರು.
ಉಪನ್ಯಾಸ ನೀಡಿದ ಜೈನ ಮುನಿ ಶ್ರೀ ಪ್ರಮಾಣ ಸಾಗರ್ ಜಿ ಮಹಾರಾಜ್, ನಮ್ಮ ಮನಸ್ಸನ್ನು ದೃಢವಾಗಿರಿಸಿಕೊಳ್ಳಬೇಕು. ಸಾಂಕ್ರಾಮಿಕ ಸನ್ನಿವೇಶದಲ್ಲಿ ದುರ್ಬಲರಾಗಬಾರದು, ಭಯಪಡಬಾರದು. ನಾವು ಗುಣಮುಖರಾಗುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮನ್ನು ಕಾಪಾಡುತ್ತದೆ. ಈ ಪರಿಸ್ಥಿತಿ ಅರೆಕಾಲಿಕವಾಗಿದ್ದು, ಇದನ್ನು ನಾವು ಗೆಲ್ಲಬೇಕು. ಒಟ್ಟಿನಲ್ಲಿ ದೇಹಕ್ಕೆ ಸಾವಿದೆಯೇ ಹೊರತು ಆತ್ಮಕ್ಕಲ್ಲ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.