ನವದೆಹಲಿ: ರಷ್ಯಾ ಭಾರತಕ್ಕೆ ಕಳುಹಿಸಿದ ತುರ್ತು ಮಾನವೀಯ ನೆರವಿನ ಮೊದಲ ಬ್ಯಾಚ್ ನವದೆಹಲಿಗೆ ಬಂದಿಳಿದಿದೆ.
ಭಾರತದಲ್ಲಿನ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಾಶೇವ್ ಈ ಬಗ್ಗೆ ಮಾತನಾಡಿ, ಉಭಯ ದೇಶಗಳ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವದಡಿ ಮತ್ತು ನಮ್ಮ ಕೋವಿಡ್-19 ವಿರೋಧಿ ಸಹಕಾರದ ಹಿನ್ನೆಲೆಯಲ್ಲಿ ಭಾರತಕ್ಕೆ ಮಾನವೀಯ ನೆರವು ಕಳುಹಿಸಲು ರಷ್ಯಾದ ಒಕ್ಕೂಟ ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ರಷ್ಯಾದ ಎಮರ್ಕಾಮ್ ನಿರ್ವಹಿಸುತ್ತಿರುವ ಎರಡು ತುರ್ತು ವಿಮಾನಗಳು ಇಂದು ನವದೆಹಲಿಗೆ ಬಂದಿವೆ ಎಂದು ಅವರು ಹೇಳಿದರು.
ಆಮ್ಲಜನಕ ಸಾಂದ್ರಕಗಳು, ಶ್ವಾಸಕೋಶದ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳು, ಹಾಸಿಗೆಯ ಪಕ್ಕದಲ್ಲಿ ಅಳವಡಿಸಲ್ಪಡುವ ಮಾನಿಟರ್ಗಳು, ಕೊರೊನಾವೀರ್ ಸೇರಿದಂತೆ ಔಷಧಿಗಳನ್ನು ಮತ್ತು ಇತರ ಅಗತ್ಯ ಔಷಧೀಯ ವಸ್ತುಗಳನ್ನು ರಷ್ಯಾದಿಂದ ಹೊತ್ತು ವಿಮಾನಗಳು ಭಾರತಕ್ಕೆ ಬಂದಿಳಿದಿವೆ.
“ನಮ್ಮ ಪ್ರಯತ್ನಗಳನ್ನು ಒಂದುಗೂಡಿಸುವುದು ಮತ್ತು ಕಷ್ಟದ ಸಮಯದಲ್ಲಿ ಪರಸ್ಪರ ಬೆಂಬಲಿಸುವುದು ನಾವು ಕೋವಿಡ್ ಅನ್ನು ಸೋಲಿಸುವ ಏಕೈಕ ಮಾರ್ಗವಾಗಿದೆ. ಸಾಮೂಹಿಕ ಪ್ರಯತ್ನಗಳು ಮತ್ತು ಪರಸ್ಪರ ಗೌರವವು ಯಾವುದೇ ಸವಾಲಿಗೆ ಸ್ಪಂದಿಸುವ ಪ್ರಮುಖ ವಿಧಾನವಾಗಿರಬೇಕು. ಕೋವಿಡ್ ಬೆದರಿಕೆಯ ವಿರುದ್ಧ ಜಂಟಿ ಹೋರಾಟವು ಪ್ರಸ್ತುತ ರಷ್ಯಾ-ಭಾರತ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ” ಎಂದು ಕುಡಾಶೇವ್ ಹೇಳಿದ್ದಾರೆ.
ನಮ್ಮ ಸಾಂಪ್ರದಾಯಿಕವಾದ ಸ್ನೇಹ ಸಂಬಂಧದಿಂದಾಗಿ ರಷ್ಯಾ ಭಾರತೀಯ ಜನರೊಂದಿಗೆ ಪ್ರಾಮಾಣಿಕ ಅನುಭೂತಿಯೊಂದಿಗೆ ಇರುತ್ತದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.