ನ್ಯೂಯಾರ್ಕ್: ನ್ಯೂಯಾರ್ಕ್ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ ಎ 102 ವಿಮಾನದ ಮೂಲಕ ಐದು ಟನ್ ಆಮ್ಲಜನಕ ಕಾನ್ಸೆಂಟ್ರೇಟರ್ಸ್ ಅನ್ನು ಸರಕುಗಳಾಗಿ ಭಾರತಕ್ಕೆ ಸಾಗಿಸಲಾಗಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯ ಬಿಕ್ಕಟ್ಟನ್ನು ನಿಭಾಯಿಸಲು ಭಾರತ ಸರ್ಕಾರ ಮಾಡಿರುವ ವ್ಯವಸ್ಥೆಯ ಭಾಗವಾಗಿ ಇಂದು ಈ ರವಾನೆ ನವದೆಹಲಿಗೆ ಬರಲಿದೆ.
ವಿಶಾಲವಾದ ಈ ಪ್ರಯಾಣಿಕ ವಿಮಾನವು ರಾಷ್ಟ್ರ ರಾಜಧಾನಿಗೆ ತಲುಪಲು 15 ಗಂಟೆಗಳಿಗಿಂತ ಹೆಚ್ಚು ಕಾಲ ತಡೆರಹಿತವಾಗಿ ಕಾರ್ಯನಿರ್ವಹಿಸಲಿದೆ.
“ಫಿಲಿಪ್ಸ್ ಅಟ್ಲಾಂಟಾ ರವಾನಿಸಿರುವ ಈ ರವಾನೆಯ ಹೊರತಾಗಿ, ಆಮ್ಲಜನಕ ಕಾನ್ಸೆಂಟ್ರೇಟರ್ಸ್ ಅನ್ನು ಹೊತ್ತ ಹೆಚ್ಚುವರಿ ವಿಮಾನಗಳು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನೆವಾರ್ಕ್ನಿಂದ ನೂರಾರು ಕಾನ್ಸೆಂಟ್ರೇಟರ್ಸ್ ಅನ್ನು ಸಾಗಿಸಲು ಸಜ್ಜಾಗಿ ಎ” ಎಂದು ಯುನೈಟೆಡ್ ಸ್ಟೇಟ್ಸ್ನಲ್ಲಿನ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಎಸ್ ನಿಂದ ಭಾರತಕ್ಕೆ ಮುಂದಿನ ವಿಮಾನ ನೆವಾರ್ಕ್ ವಿಮಾನ ನಿಲ್ದಾಣದಿಂದ ಏಪ್ರಿಲ್ 27 ರಂದು ದೆಹಲಿಗೆ ತೆರಳಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ನಡುವೆ, ಯುಎಸ್ನಲ್ಲಿನ ಭಾರತೀಯ ವಲಸೆಗಾರರು ದೇಶಕ್ಕೆ ಕಾನ್ಸೆಂಟ್ರೇಟರ್ಸ್ ಮತ್ತು ಆಕ್ಸಿಮೀಟರ್ಳಂತಹ ಇತರ ವೈದ್ಯಕೀಯ ಸರಬರಾಜುಗಳನ್ನು ಕೊಡುಗೆ ನೀಡಲು ಮುಂದಾಗಿದ್ದಾರೆ.
“ಭಾರತೀಯ ಅಮೇರಿಕನ್ ಸಮುದಾಯ, ಎಸ್ಜಿಒ ಮತ್ತು ಖಾಸಗಿ ವ್ಯಕ್ತಿಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದಿಂದ ಹೆಚ್ಚು ಪ್ರಭಾವಿತರಾದವರನ್ನು ತಲುಪುವ ಮಾರ್ಗಗಳ ಬಗ್ಗೆ ನಮ್ಮಲ್ಲಿ ವಿಚಾರಿಸುತ್ತಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಶೀಲ್ಡ್ ಲಸಿಕೆ ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಾಮೆರಿಕ ಪೂರೈಸಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ದೃಢಪಡಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಮತ್ತು ಅವರ ಅಮೇರಿಕದ ಜೇಕ್ ಸುಲ್ಲಿವಾನ್ ನಡುವೆ ನಡೆದ ಮಾತುಕತೆಯ ಪರಿಣಾಮವಾಗಿ ಕಚ್ಛಾ ವಸ್ತು ಪೂರೈಕೆಗೆ ಬೈಡನ್ ಒಪ್ಪಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.