News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀನಗರ: ಉಗ್ರ ದಾಳಿಯ 2 ತಿಂಗಳ ಬಳಿಕ ಮರುತೆರೆದ ಪ್ರಸಿದ್ಧ ʼಕೃಷ್ಣ ಢಾಬಾʼ

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರ ನಗರದ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ‘ಕೃಷ್ಣ ಢಾಬಾ’ ಮಾಲೀಕ ರಮೇಶ್ ಕುಮಾರ್ ಅವರು ತಮ್ಮ ಮಗ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಸುಮಾರು ಎರಡು ತಿಂಗಳ ನಂತರ ಮಂಗಳವಾರ ಮತ್ತೆ ತಮ್ಮ ರೆಸ್ಟೋರೆಂಟ್‌ ಅನ್ನು ಪುನರಾರಂಭಿಸಿದ್ದಾರೆ

ರಮೇಶ್ ಕುಮಾರ್ ಅವರ ಪುತ್ರ ಆಕಾಶ್ ಮೆಹ್ರಾ ಫೆಬ್ರವರಿ 17 ರಂದು ಸಂಜೆ ಬಿಡುವಿಲ್ಲದ ಸಮಯದಲ್ಲಿ ಗ್ರಾಹಕರೊಂದಿಗೆ ತೊಡಗಿದ್ದಾಗ, ಮೋಟಾರು ಬೈಕ್‌ನಲ್ಲಿ ಬಂದ ಹಂತಕರು ಆತನ ಮೇಲೆ ಗುಂಡು ಹಾರಿಸಿದ್ದರು. ಆಕಾಶ್ ನಗರದ S.M.H.S ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬಳಿಕ ಇಹಲೋಕ ತ್ಯಜಿಸಿದ್ದರು. ಫೆಬ್ರವರಿ 28 ರಂದು ಅವರು ಸಾವನ್ನಪ್ಪಿದ್ದರು.

48 ಗಂಟೆಗಳಲ್ಲಿ, ಪೊಲೀಸರು ಎಲ್ಲಾ 3 ಹಂತಕರನ್ನು ಬಂಧಿಸಿದ್ದರು ಮತ್ತು ದಾಳಿ ನಡೆಸಲು ಬಳಸಿದ ಬೈಕ್ ಅನ್ನು ಸಹ ವಶಪಡಿಸಿಕೊಂಡಿದ್ದರು.

ಘಟನೆ ನಡೆದು ಸುಮಾರು 2 ತಿಂಗಳ ನಂತರ, ಕೃಷ್ಣ ಢಾಬಾ ಮತ್ತೆ ಮಂಗಳವಾರ ತನ್ನ ಗ್ರಾಹಕರಿಗೆ ಆಹಾರವನ್ನು ಪೂರೈಸಲು ಪ್ರಾರಂಭಿಸಿದೆ, ಇಂದು ಪವಿತ್ರ ದಿನವಾದ ಕಾರಣ ಮಾಲೀಕ ರಮೇಶ್ ಕುಮಾರ್ ಅವರು ಡಾಬಾ ಮರುತೆರೆಯಲು ಈ ದಿನವನ್ನು ಆರಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಅವರು, ನಾನು ಶ್ರೀನಗರದಲ್ಲಿ ಹುಟ್ಟಿ ಬೆಳೆದವನು ಮತ್ತು ಇದು ನನ್ನ ನಗರ ಮತ್ತು ಜನ್ಮಸ್ಥಳ ಎಂದು ಹೇಳಿದರು.

“ನನ್ನ ಮಗನನ್ನು ಕೊಂದವರ ಬಗ್ಗೆ ನನಗೆ ಯಾವುದೇ ದ್ವೇಷ ಇಲ್ಲ. ಸರ್ಕಾರ ಅವರನ್ನು ಬಿಡುಗಡೆ ಮಾಡಲು ಬಯಸಿದರೆ, ನಾನು ಆಕ್ಷೇಪಿಸುವುದಿಲ್ಲ” ಎಂದಿದ್ದಾರೆ.

“ಆದರೆ, ಇದು ನನ್ನ ನಗರ ಮತ್ತು ಜನ್ಮಸ್ಥಳವಾಗಿದ್ದು, ನಾನು ಯಾವುದೇ ಕಾರಣಕ್ಕೂ ಇದನ್ನು ಬಿಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಸದಾ ತಮ್ಮೊಂದಿಗೆ ನಿಂತ ಸ್ಥಳೀಯ ಜನರ ಅಭಿಮಾನಕ್ಕೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ತಾಜಾ, ರುಚಿಕರ ಮತ್ತು ಸಮಂಜಸವಾದ ಬೆಲೆಯ ಆಹಾರಕ್ಕಾಗಿ ಇವರ ಡಾಬಾ ಸಾಮಾನ್ಯ ಸಸ್ಯಾಹಾರಿ ಆಹಾರ ಪ್ರಿಯರ ನೆಚ್ಚಿನ ತಾಣವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top