ನವದೆಹಲಿ: ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಬಾಕಿ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಅಗತ್ಯವನ್ನು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಜಂಟಿಯಾಗಿ ತಳಮಟ್ಟದ ಮೇಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು, ಯಾವುದೇ ಹೊಸ ಘಟನೆಗಳನ್ನು ತಪ್ಪಿಸಲು ಮತ್ತು ಗಡಿ ಪ್ರದೇಶಗಳಲ್ಲಿ ಜಂಟಿಯಾಗಿ ಶಾಂತಿಯನ್ನು ಕಾಪಾಡಿಕೊಳ್ಳಲು ಪರಸ್ಪರ ಒಪ್ಪಿಗೆ ಸೂಚಿಸಿವೆ.
ನಿನ್ನೆ ಚುಶುಲ್-ಮೊಲ್ಡೊ ಗಡಿ ಸಭೆ ಕೇಂದ್ರದಲ್ಲಿ ನಡೆದ 11 ನೇ ಸುತ್ತಿನ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ, ಪೂರ್ವ ಲಡಾಖ್ ಎಲ್ಎಸಿ, ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆ ಹಿಂಪಡೆಯುವಿಕೆಗೆ ಸಂಬಂಧಿಸಿದ ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಉಭಯ ಕಡೆಯವರು ವಿವರವಾದ ಅಭಿಪ್ರಾಯ ವಿನಿಮಯವನ್ನು ಮಾಡಿದ್ದಾರೆ.
ಸಭೆಯಲ್ಲಿ, ಇತರ ಪ್ರದೇಶಗಳಲ್ಲಿ ಸೇನಾ ಹಿಂಪಡೆಯುವಿಕೆಯು ಮತ್ತಷ್ಟು ಉದ್ವಿಗ್ನತೆ ತಡೆಗಟ್ಟಲು ಮತ್ತು ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಸಾಧಿಸಲು ದಾರಿ ಮಾಡಿಕೊಡುತ್ತದೆ ಎಂದು ಉಭಯ ಪಡೆಗಳು ಅಭಿಪ್ರಾಯಕ್ಕೆ ಬಂದಿವೆ.
ಭಾರತ ಮತ್ತು ಚೀನಾ ತಮ್ಮ ನಾಯಕರಿಂದ ಒಮ್ಮತದ ಮಾರ್ಗದರ್ಶನ ಪಡೆಯುವುದು, ತಮ್ಮ ಸಂವಹನ ಮತ್ತು ಸಂವಾದವನ್ನು ಮುಂದುವರಿಸುವುದು ಮತ್ತು ಉಳಿದ ಸಮಸ್ಯೆಗಳ ಶೀಘ್ರ ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕಾಗಿ ಕೆಲಸ ಮಾಡುವುದು ಮುಖ್ಯ ಎಂದು ಉಭಯ ಕಡೆಗಳು ಒಪ್ಪಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.