ನವದೆಹಲಿ: ಖಲಿಸ್ಥಾನ್ ಲಿಬರೇಶನ್ ಫೋರ್ಸ್ ನಾರ್ಕೊ ಟೆರರ್ ಪ್ರಕರಣದಲ್ಲಿ ಅಮೃತಸರ ನಿವಾಸಿ ರಾಜೇಂದರ್ ಸಿಂಗ್ ಮತ್ತು ಮೂಲತಃ ನವದೆಹಲಿಯ ನಿವಾಸಿಗಳು ಆದರೆ ಪ್ರಸ್ತುತ ದುಬೈನಲ್ಲಿರುವ ಪರ್ಮಿಂದರ್ ಪಾಲ್ ಸಿಂಗ್ ಮತ್ತು ಜಸ್ಮೀತ್ ಸಿಂಗ್ ಹಕೀಮ್ಜಾಡಾ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಂಜಾಬ್ನ ಮೊಹಾಲಿಯಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಪ್ಲಿಮೆಂಟರಿ ಚಾರ್ಜ್ಶೀಟ್ ದಾಖಲಿಸಿದೆ.
ಸೆಕ್ಷನ್ 120 ಬಿ ಐಪಿಸಿ, ಸೆಕ್ಷನ್ 25, 27 ಎ ಮತ್ತು 29 ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ (ಎನ್ಡಿಪಿಎಸ್) ಕಾಯ್ದೆ, 1985 ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಇವರ ವಿರುದ್ಧ ಸಪ್ಲಿಮೆಂಟರಿ ಚಾರ್ಜ್ಶೀಟ್ ದಾಖಲಿಸಲಾಗಿದೆ.
1,20,000 ರೂ ಮೌಲ್ಯದ 500 ಗ್ರಾಂ ಹೆರಾಯಿನ್ ಮತ್ತು ಡ್ರಗ್ಸ್ ಅನ್ನು 2020 ಮೇ 31 ರಂದು ಆರೋಪಿ ಜಜ್ಬೀರ್ ಸಿಂಗ್ ಸಮ್ರಾ ಮತ್ತು ಇತರ ಇಬ್ಬರು ಆರೋಪಿಗಳಿಂದ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಸರ (ಗ್ರಾಮೀಣ) ತರ್ಸಿಕ್ಕ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್ಐಎ ಈ ಪ್ರಕರಣವನ್ನು ಮರು ನೋಂದಾಯಿಸಿ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಇದಕ್ಕೂ ಮೊದಲು, ತನಿಖೆ ಪೂರ್ಣಗೊಂಡ ನಂತರ, ಐಪಿಸಿ, ಎನ್ಡಿಪಿಎಸ್ ಕಾಯ್ದೆ ಮತ್ತು ಯುಎ (ಪಿ) ಕಾಯ್ದೆಯ ವಿವಿಧ ವಿಭಾಗಗಳಡಿ ಪ್ರಕರಣದ 10 ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿತ್ತು.
ಭಾರತದಲ್ಲಿ ಹೆರಾಯಿನ್ ಮಾರಾಟಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಂದರ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ, ಆದರೆ ಭಾರತದಿಂದ ದುಬೈಗೆ ಹವಾಲಾ ಮೂಲಕ ಬರುವ ಆದಾಯವನ್ನು ಸಾಗಿಸುವಲ್ಲಿ ಪರ್ಮಿಂದರ್ ಪಾಲ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.